ಹುಬ್ಬಳ್ಳಿ: ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಪದಕ ಜಯಿಸಿದ್ದ ವಿಜಯಪುರದ ರಾಜು ಬಿರಾದಾರ ಅವರು ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾಗಿ ಭಾನುವಾರ ಅವಿರೋಧವಾಗಿ ಆಯ್ಕೆಯಾದರು.
ಎರಡು ದಶಕಕ್ಕೂ ಹೆಚ್ಚು ಕಾಲ ಅಧ್ಯಕ್ಷರಾಗಿದ್ದ ಶ್ರೀಧರ ಗೋರೆ ಅವರ ನಿಧನದಿಂದಾಗಿ ಅಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಇದೇ ವೇಳೆ ಇನ್ನುಳಿದ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳು: ಜಿ.ವಿ. ಪಾಟೀಲ (ಚೇರ್ಮನ್), ಆರ್.ಎಚ್. ಪೂಜಾರಿ, ಸಿ.ಎಸ್. ಜಗಲಿ, ವೈ.ಎಚ್. ಯಂತೆಟ್ಟು, ಸಿ.ಕೆ. ಚನ್ನಾಳ (ಉಪಾಧ್ಯಕ್ಷರು), ಶ್ರೀಶೈಲ ಎಂ. ಕುರಣಿ (ಗೌರವ ಪ್ರಧಾನ ಕಾರ್ಯದರ್ಶಿ), ಎಸ್.ಎನ್. ಪಡತಾರೆ, ಎಂ.ಎಚ್. ಕುರಿಯರ (ಜಂಟಿ ಕಾರ್ಯದರ್ಶಿಗಳು), ರಮೇಶ ಟಿ. ಪಾಟೀಲ (ಖಜಾಂಚಿ), ವಿಠ್ದಲ ವೈ. ಬೋರ್ಜಿ (ಸಂಘಟನಾ ಕಾರ್ಯದರ್ಶಿ).
ಎಲ್.ಎಚ್. ಪೂಜಾರಿ, ಎಂ.ಎ. ಗಫಾರ್, ಶ್ರೀಕಾಂತ ಪೂಜಾರ, ಶಕುಂತಲಾ ಬಿರಾದಾರ (ಕಾರ್ಯಕಾರಿ ಸಮಿತಿ ಸದಸ್ಯರು), ಎಸ್.ಎಫ್. ಕೊಡ್ಲಿ, ಬಿ.ಜಿ. ಮದರಖಂಡಿ, ಎಲ್.ಬಿ. ಮಾಲಿ, ಎಂ.ಐ. ಕನಕೆ (ತಾಂತ್ರಿಕ ಸಮಿತಿ ಸದಸ್ಯರು) ಮತ್ತು ಶ್ರೀಕಾಂತ ಮಠ (ವೆಬ್ ಮೀಡಿಯಾ ಸಲಹೆಗಾರ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.