ADVERTISEMENT

ಹುಬ್ಬಳ್ಳಿಯಲ್ಲಿ ರಕ್ಷಾಬಂಧನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:51 IST
Last Updated 3 ಆಗಸ್ಟ್ 2020, 14:51 IST
‌ರಕ್ಷಾಬಂಧನ ಅಂಗವಾಗಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಮವಾರ ಮಹಿಳೆಯರು ರಾಖಿ ಕಟ್ಟಿದರು
‌ರಕ್ಷಾಬಂಧನ ಅಂಗವಾಗಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸ್ ಸಿಬ್ಬಂದಿಗೆ ಸೋಮವಾರ ಮಹಿಳೆಯರು ರಾಖಿ ಕಟ್ಟಿದರು   

ಹುಬ್ಬಳ್ಳಿ: ನಿತ್ಯ ಕೊರೊನಾ ಸೋಂಕಿನ ಸುದ್ದಿಗಳಿಂದ ಬೇಸತ್ತಿದ್ದ ನಗರದ ಜನ ಸೋಮವಾರ ರಕ್ಷಾಬಂಧನದ ಸಂಭ್ರಮದಲ್ಲಿ ಮಿಂದೆದ್ದೆರು. ಸಹೋದರ ಹಾಗೂ ಸಹೋದರಿಯರ ನಡುವೆ ಬಾಂಧವ್ಯ ಬೆಸೆಯುವ ಈ ಹಬ್ಬ ಜನರ ಸಡಗರಕ್ಕೂ ಕಾರಣವಾಯಿತು.

ನಗರದಲ್ಲಿ ವಿವಿಧ ಸಂಘಟನೆಗಳು ಮತ್ತು ಮಹಿಳಾ ಸಂಘಗಳ ಪದಾಧಿಕಾರಿಗಳು ರಾಖಿ ಕಟ್ಟಿದರು. ವಿಶ್ವ ಹಿಂದೂ ಪರಿಷತ್‌ ಹುಬ್ಬಳ್ಳಿ ಮಹಾನಗರ ಘಟಕವು ಕೋವಿಡ್‌ ವಾರಿಯರ್‌ಗಳಾದ ಪೊಲೀಸರು, ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ, ಸಾರಿಗೆ ನೌಕರರು ಮತ್ತು ಪತ್ರಿಕಾ ವಿತರಕರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆದರು. ವಾರಿಯರ್‌ಗಳಿಗೆ ಮಾಸ್ಕ್‌ಗಳನ್ನು ವಿತರಿಸಿಯೂ ಗಮನ ಸೆಳೆದರು

ಪರಿಷತ್‌ನ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಜಿ, ರಘು ಯಲ್ಲಕನುರ, ಸುಭಾಷ್ ಡಂಕ್, ಭೀಮಪ್ಪ, ವೆಂಕಟೇಶ, ಆನಂದ, ಗಣೇಶ, ಪ್ರಕಾಶ ಇದ್ದರು. ಮಹಿಳಾ ಸಂಘದ ಪದಾಧಿಕಾರಿಗಳು ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ರಾಖಿ ಕಟ್ಟಿದರು. ಮನೆಗಳಲ್ಲಿ ಸಹೋದರಿಯರು, ಚಿಣ್ಣರು ಸಹೋದರರಿಗೆ ತಿಲಕವಿಟ್ಟು, ರಾಖಿ ಕಟ್ಟಿ, ಆರತಿ ಬೆಳಗಿ ಪರಸ್ಪರ ಸಿಹಿ ಹಂಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.