ADVERTISEMENT

ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2020, 12:33 IST
Last Updated 22 ಆಗಸ್ಟ್ 2020, 12:33 IST
ನವಿಲುತೀರ್ಥ ಜಲಾಶಯ (ಸಂಗ್ರಹ ಚಿತ್ರ)
ನವಿಲುತೀರ್ಥ ಜಲಾಶಯ (ಸಂಗ್ರಹ ಚಿತ್ರ)   

ಗದಗ:ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ11264 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿದು, ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಗದಗ ಜಿಲ್ಲೆಯ ಲಖಮಾಪುರ, ಕೊಣ್ಣೂರ, ಬೂದಿಹಾಳ, ಹೊಳೆಮಣ್ಣೂರ ಗ್ರಾಮಗಳಲ್ಲಿ ಪ್ರವಾಹ ಭೀತಿ ಕಂಡುಬಂದಿದೆ.

ನದಿಯಲ್ಲಿ ನೀರು ಇಳಿದಿದ್ದ ಎರಡೇ ದಿನಗಳಲ್ಲಿ ಮತ್ತು ನೀರಿನ ಮಟ್ಟ ಏರಿಕೆಯಾಗಿರುವುದರಿಂದನದಿ ತೀರದ ಕುಟುಂಬಗಳು ಮತ್ತೆ ಕಂಗಾಲಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.