ADVERTISEMENT

ಗದಗ: ಸಾಲಬಾಧೆ, ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 10:05 IST
Last Updated 16 ಅಕ್ಟೋಬರ್ 2018, 10:05 IST
ರಂಗಪ್ಪ ಕೊಪ್ಪದ
ರಂಗಪ್ಪ ಕೊಪ್ಪದ   

ಲಕ್ಷ್ಮೇಶ್ವರ: ಸಮೀಪದ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ಸಾಲಬಾಧೆ ತಾಳದೆ ಮನನೊಂದ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ರಂಗಪ್ಪ ಹನಮಂತಪ್ಪ ಕೊಪ್ಪದ (58) ಮೃತ ರೈತ.

ಸದರಿ ರೈತನಿಗೆ ಐದು ಎಕರೆ ಹೊಲ ಇದ್ದು ಇವರು ಲಕ್ಷ್ಮೇಶ್ವರದ ಎಸ್‍ಬಿಎಂ (ಎಸ್‍ಬಿಆಯ್) ಬ್ಯಾಂಕಿನಲ್ಲಿ ₹3 ಲಕ್ಷ ಸಾಲ ಮಾಡಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಸಾಂತ್ವನ: ಶಾಸಕ ರಾಮಣ್ಣ ಲಮಾಣಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.