ADVERTISEMENT

`ಮಹಾಮನೆಯಲ್ಲಿ ಶೈತ್ಯಾಗಾರ ಆರಂಭಕ್ಕೆ ಚಿಂತನೆ'

ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:07 IST
Last Updated 24 ಜೂನ್ 2013, 8:07 IST

ಹಳೇಬೀಡು: ರೈತರು ಬೆಳೆದ ತರಕಾರಿಗಳನ್ನು ಸಂರಕ್ಷಿಸಲು ಶಿವಪುರದ ಗುರು ಬಸವ ಮಹಾಮನೆಯಲ್ಲಿ ಶೈತ್ಯಾಗಾರ ಆರಂಭಿಸಲು ಚಿಂತನೆ ನಡೆದಿದೆ ಎಂದು ಧಾರವಾಡ ಮನುಗುಂಡಿ ಹಾಗೂ ಶಿವಪುರ ಗುರುಬಸವ ಮಹಮನೆಯ ಪೀಠಾಧ್ಯಕ್ಷ ಬಸವಾನಂದ ಸ್ವಾಮೀಜಿ ಹೇಳಿದರು.

ಹಳೇಬೀಡು ಅಡಗೂರು ಮಧ್ಯದಲ್ಲಿರುವ ಶಿವಪುರದ ಗುರುಬಸವ ಮಹಾಮನೆ ವೈದ್ಯ ಸಂಗಣ್ಣ ನಿಸರ್ಗೋಪಚಾರ ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ನಡೆದ ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನಾ ಸಮಾರಂಭ, 14ನೇ ಶಿವಾನುಭವ ಗೋಷ್ಠಿಯಲ್ಲಿ  ಮಾತನಾಡಿದರು.

ಹಾಸನ ಜಿಲ್ಲೆಯಲ್ಲಿ ಮಾದಿಹಳ್ಳಿ ಹಳೇಬೀಡು ಹೋಬಳಿಗಳು ತರಕಾರಿ ಬೆಳೆಗೆ ಖ್ಯಾತಿ ಪಡೆದಿವೆ. ತರಕಾರಿಯನ್ನು ಸಂರಕ್ಷಿಸಿ ರೈತರಿಗೆ ಶ್ರಮಕ್ಕೆ ತಕ್ಷ ಪ್ರತಿಫಲ ನೀಡುವ ಕೆಲಸ ಆಗಬೇಕಾಗಿದೆ ಎಂದರು.

ನೀರಿನ ಸದ್ಬಳಕೆಯ ದೃಷ್ಟಿಯಿಂದ ಧಾರವಾಡದ ಮನುಗುಂಡಿಯ ಮಹಮನೆಯಲ್ಲಿ ಮಳೆಕೊಯ್ಲು ಮಾಡಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ. ಶಿವಪುರದಲ್ಲಿ ನಿರ್ಮಿಸುವ ಶೈತ್ಯಾಗಾರದ ಕೆಳಗೆ ಮಳೆ ನೀರು ಸಂಗ್ರಹಿಸಿ ಮಹಾಮನೆಯಲ್ಲಿ ಬಳಕೆ ಮಾಡಲಾಗುವುದು ಎಂದು ಬಸವಾನಂದ ಸ್ವಾಮೀಜಿ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.