ADVERTISEMENT

ಹವಾಮಾನ ಆಧಾರಿತ ಬೆಳೆವಿಮೆ ಜಾರಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:29 IST
Last Updated 11 ಜೂನ್ 2013, 8:29 IST

ಹಾಸನ: 2013ನೇ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನಗೊಳಿಸಲಾಗಿತ್ತಿದ್ದು, ಆಯ್ಕೆಯಾಗಿರುವ ಬೆಳೆ ಮತ್ತು ಹೋಬಳಿಗಳ ವಿವರ ಇಂತಿದೆ.

ಆಲೂರು: ಎಲ್ಲ ಹೋಬಳಿ- ಮುಸುಕಿನ ಜೋಳ, ಆಲೂಗೆಡ್ಡೆ, ರಾಗಿ (ಮಳೆ ಆಶ್ರಿತ)
ಅರಕಲಗೂಡು: ಎಲ್ಲ ಹೋಬಳಿ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆ ಆಶ್ರಿತ)
ಅರಸೀಕೆರೆ: ಬಾಣಾವರ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ (ಮಳೆ ಆಶ್ರಿತ), ಗಂಡಸಿ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು, ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆ ಆಶ್ರಿತ), ಜಾವಗಲ್ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಹೆಸರು, ತೊಗರಿ, ಉದ್ದು, ಸೂರ್ಯಕಾಂತಿ (ಮಳೆ ಆಶ್ರಿತ), ಕಣಕಟ್ಟೆ ಹೋಬಳಿ- ರಾಗಿ, ಮುಸುಕಿನಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು (ಮಳೆ ಆಶ್ರಿತ). 

ಬೇಲೂರು: `ಅಗ್ರಿ ಕಲ್ಚರ್ ಇನ್‌ಶೂರೆನ್ಸ್ ಕಂಪೆನಿ ಆಫ್ ಇಂಡಿಯಾ' ಅನುಷ್ಠಾನಗೊಳಿಸುವ ಯೋಜನೆಯಡಿಬರುವ ಕ್ಷೇತ್ರ ಘಟಕ ಹಾಗೂ ಬೆಳೆಗಳು.
ಅರೇಹಳ್ಳಿ- ರಾಗಿ, ಮುಸುಕಿನಜೋಳ, ಹತ್ತಿ, ಆಲೂಗೆಡ್ಡೆ (ಮಳೆ ಆಶ್ರಿತ), ಬೇಲೂರು- ರಾಗಿ, ಮುಸುಕಿನಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆಆಶ್ರಿತ). ಆಲೂಗೆಡ್ಡೆ (ನೀರಾವರಿ) 
ಬಿಕ್ಕೋಡು, ರಾಗಿ, ಮುಸುಕಿನಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆಆಶ್ರಿತ).

ಹಳೇಬೀಡು: ರಾಗಿ, ಮುಸುಕಿನಜೋಳ,ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, (ಮಳೆ ಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ).
ಮಾದೀಹಳ್ಳಿ: ರಾಗಿ, ಮುಸುಕಿನಜೋಳ, ತೊಗರಿ, ಸೂರ್ಯಕಾಂತಿ, ಹತ್ತಿ (ಮಳೆಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ).
ಚನ್ನರಾಯಪಟ್ಟಣ ತಾಲ್ಲೂಕು: ಬಾಗೂರು- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), ಆಲೂಗೆಡ್ಡೆ(ನೀರಾವರಿ).

ಚನ್ನರಾಯಪಟ್ಟಣ: ಮುಸುಕಿನಜೋಳ, ಹೆಸರು, ರಾಗಿ (ಮಳೆಆಶ್ರಿತ), ದಂಡಿಗನಹಳ್ಳಿ ಹೋಬಳಿ- ರಾಗಿ, ಮುಸುಕಿನಜೋಳ, ಹೆಸರು (ಮಳೆಆಶ್ರಿತ), ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆಆಶ್ರಿತ)

ಹಾಸನ ತಾಲ್ಲೂಕು: ಹಾಸನ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ). ಕಟ್ಟಾಯ, ಸಾಲಗಾಮೆ, ದುದ್ದ, ಶಾಂತಿಗ್ರಾಮ ಹೋಬಳಿ- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), ಆಲೂಗೆಡ್ಡೆ(ನೀರಾವರಿ).

ಹೊಳೆನರಸೀಪುರ ತಾಲ್ಲೂಕು: ಎಲ್ಲ ಹೋಬಳಿಗಳು- ರಾಗಿ, ಮುಸುಕಿನಜೋಳ, ಆಲೂಗೆಡ್ಡೆ (ಮಳೆಆಶ್ರಿತ), 
ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯ ಯಾವುದಾದ ರೊಂದು ಯೋಜನೆಯನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡುವಂತೆ ತಿಳಿಸಲಾಗಿದೆ.

ಈ ಯೋಜನೆಯಡಿ ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಜುಲೈ 31ರೊಳಗೆ ಯೋಜನೆ ಬಳಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಕರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.