ಹಾಸನ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಆರ್ಭಟ ಏರುಮುಖದಲ್ಲಿದ್ದು, ಹೊಸ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಶುಕ್ರವಾರ ಒಂದೇ ದಿನ 2202 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 20 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 60806ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯು 768ಕ್ಕೆ ತಲುಪಿದೆ.
2634 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಚೇತರಿಕೆ ಕಂಡವರ ಸಂಖ್ಯೆ 44,417 ಗಡಿ ದಾಟಿದೆ. 15,621 ಸಕ್ರಿಯ ಪ್ರಕರಣಗಳ ಪೈಕಿ 133 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಆಲೂರು ತಾಲ್ಲೂಕಿನ 90, ಅರಕಲಗೂಡು 245, ಅರಸೀಕೆರೆ 228, ಬೇಲೂರು 208, ಚನ್ನರಾಯಪಟ್ಟಣ 293, ಹಾಸನ 849, ಹೊಳೆನರಸೀಪುರ 154, ಸಕಲೇಶಪುರ 118 ಹಾಗೂ ಇತರೆ ಜಿಲ್ಲೆಯ 17 ಮಂದಿಗೆ ಸೋಂಕು ತಗುಲಿದೆ. ಹಾಸನತಾಲ್ಲೂಕಿನ 8, ಅರಸೀಕೆರೆ 4, ಚನ್ನರಾಯಪಟ್ಟಣ, ಸಕಲೇಶಪುರದ ತಲಾ ಮೂವರು, ಬೇಲೂರು ಹಾಗೂ ಇತರೆ ಜಿಲ್ಲೆ ತಲಾ ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.