ADVERTISEMENT

ಮೂವರಿಗೆ ಹೋಂ ಕ್ವಾರಂಟೈನ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 16:24 IST
Last Updated 24 ಏಪ್ರಿಲ್ 2020, 16:24 IST

ಸಕಲೇಶಪುರ: ಕೇರಳ ನೋಂದಣಿ ಸಂಖ್ಯೆ ಇರುವ ಕಾರಿನಲ್ಲಿ ಪಟ್ಟಣಕ್ಕೆ ಬಂದ ಮೂವರನ್ನು ಶುಕ್ರವಾರ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಪಟ್ಟಣದ ಹೇಮಾವತಿ ನಗರ ಬಡಾವಣೆಗೆ ಗುರುವಾರ ರಾತ್ರಿ ಮೂವರು ಕಾರಿನಲ್ಲಿ ಬಂದಿದ್ದಾರೆ. ಈ ಬಗ್ಗೆ ಸ್ಥಳೀಯರು ಕೊರೋನಾ ಕಾರ್ಯಪಡೆಗೆ ಮಾಹಿತಿ ನೀಡಿದ್ದಾರೆ.

ಸಿ.ಡಿ.ಪಿ.ಓ ದಿಲೀಪ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಸುಧೀಂದ್ರ ನೇತೃತ್ವದ ತಂಡ ಮಾಹಿತಿ ಪಡೆಯಲು ಬಂದ ವೇಳೆ ಅವರು ಸರಿಯಾದ ಮಾಹಿತಿ ನೀಡಿಲ್ಲ. ಸ್ಥಳೀಯರು ಕೇರಳದಿಂದ ಬಂದಿದ್ದಾರೆ ಎಂದರೆ, ಮನೆಯವರು ಪಾಳ್ಯ ಸಮೀಪದ ಗ್ರಾಮದಿಂದ ಬಂದಿದ್ದಾರೆ ಎಂದು ವಾದಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಮನೆಯವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. bಳಿಕ ಅಧಿಕಾರಿಗಳು ಮೂವರ ಕೈಗೆ ಹೋಂ ಕ್ವಾರಂಟೈನ್‌ ಮುದ್ರೆ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.