ADVERTISEMENT

ಆನೆಯ ದಂತ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 3:37 IST
Last Updated 26 ನವೆಂಬರ್ 2020, 3:37 IST
ಅರಕಲಗೂಡು ತಾಲ್ಲೂಕು ಸೀಗೋಡು ಗ್ರಾಮದ ಬಳಿ ಆನೆಯ ದಂತ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ
ಅರಕಲಗೂಡು ತಾಲ್ಲೂಕು ಸೀಗೋಡು ಗ್ರಾಮದ ಬಳಿ ಆನೆಯ ದಂತ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ   

ಅರಕಲಗೂಡು: ಆನೆಯ ದಂತವನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ವಿಭಾಗದ ಪೊಲೀಸರು ಬುಧವಾರ ಬಂಧಿಸಿ, ದಂತ ಹಾಗೂ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ.

ಕೊಡಗಿನ ಗಡಿಭಾಗದ ಸೀಗೋಡು ಗ್ರಾಮದ ಬಳಿ ಪಿಎಸ್ಐ ಸುರೇಶ್ ಮತ್ತು ಸಿಬ್ಬಂದಿ ಖಚಿತ ವರ್ತಮಾನದ ಮೇರೆ ದಂತ ಸಾಗಣೆ ಮಾಡುತ್ತಿದ್ದ ವಿರಾಜಪೇಟೆಯವರೆನ್ನಲಾದ ಜೋಷ್ ಮತ್ತು ಪ್ರಶಾಂತ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನ್ಯಾಯಾಲಯ ಪ್ರಕರಣವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಿದೆ. ಆರೋಪಿಗಳನ್ನು ಇಲಾಖೆ ವಶಕ್ಕೆ ಪಡೆದಿದ್ದು, ದಂತವನ್ನು ಮಡಿಕೇರಿಯಿಂದ ಮೈಸೂರಿಗೆ ಸಾಗಣೆ ಮಾಡಲಾಗುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಈ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಕಲೇಶಪುರ ಎಸಿಎಫ್ ಜಿ.ಸಿ.ಲಿಂಗರಾಜ್ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ವಲಯ ಅರಣ್ಯಾಧಿಕಾರಿ ಕಾವ್ಯಶ್ರೀ, ಪೊಲೀಸ್ ಅರಣ್ಯ ವಿಭಾಗದ ಪಿಎಸ್ಐ ಸುರೇಶ್, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.