ADVERTISEMENT

ಅರಕಲಗೂಡು: ಕೊಟ್ಟಿಗೆ ಕುಸಿದು ಆಡು ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 4:13 IST
Last Updated 24 ಸೆಪ್ಟೆಂಬರ್ 2020, 4:13 IST
23 ಎಆರ್ ಕೆ 1: ಅರಕಲಗೂಡು ತಾಲ್ಲೂಕು ಪಟ್ಟನಹೊಸಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆ ಕುಸಿದಿರುವುದನ್ನು ತಹಶೀಲ್ದಾರ್ ರೇಣುಕುಮಾರ್ ವೀಕ್ಷಿಸಿದರು.
23 ಎಆರ್ ಕೆ 1: ಅರಕಲಗೂಡು ತಾಲ್ಲೂಕು ಪಟ್ಟನಹೊಸಹಳ್ಳಿ ಗ್ರಾಮದಲ್ಲಿ ಕೊಟ್ಟಿಗೆ ಕುಸಿದಿರುವುದನ್ನು ತಹಶೀಲ್ದಾರ್ ರೇಣುಕುಮಾರ್ ವೀಕ್ಷಿಸಿದರು.   

ಅರಕಲಗೂಡು: ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಗೆ ದನದ ಕೊಟ್ಟಿಗೆ ಕುಸಿದು ಎರಡು ಆಡುಗಳು ಮೃತಪಟ್ಟು ಎರಡು ಹಸುಗಳು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ವಿಜಾಪುರ ಅರಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿ ಪುಟ್ಟನ ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಜಯಮ್ಮ ರಂಗ ಸ್ವಾಮಿ ಅವರು ಜಮೀನಿನ ಬಳಿ ನಿರ್ಮಿಸಿದ್ದ ಕೊಟ್ಟಿಗೆ ಕುಸಿದು ಈ ಅವಘಡ ಸಂಭವಿಸಿದೆ. ಮೃತಪಟ್ಟ ಆಡುಗಳ ಬೆಲೆ ₹ 25 ಸಾವಿರ ಎಂದು ಅಂದಾಜಿಸಲಾಗಿದೆ. ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT