ADVERTISEMENT

ಯಾರನ್ನೂ ಮನೆಗೆ ಬನ್ನಿ ಅಂತ ಕರೆದಿಲ್ಲ: ಎಚ್‌.ಡಿ ರೇವಣ್ಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 7:20 IST
Last Updated 17 ಆಗಸ್ಟ್ 2021, 7:20 IST
ಎಚ್‌.ಡಿ ರೇವಣ್ಣ
ಎಚ್‌.ಡಿ ರೇವಣ್ಣ    

ಹಾಸನ: ‘ಮುಖ್ಯಮಂತ್ರಿ, ಸಚಿವರನ್ನು ನಮ್ಮ ಮನೆಗೆ ಬನ್ನಿ ಎಂದು ಕರೆದಿಲ್ಲ. ವಿರೋಧ ಪಕ್ಷಗಳ ನಾಯಕರ ಮನೆಗೆಭೇಟಿ ನೀಡಿದರೆ, ಅವರದ್ದೇ ಪಕ್ಷದ ನಾಯಕರಿಂದ ಅವರು ಬೈಯಿಸಿಕೊಳ್ಳಬೇಕಾಗುತ್ತದೆ’ ಎಂದು ರೇವಣ್ಣ ವ್ಯಂಗ್ಯವಾಡಿದರು.

ಸಿ.ಎಂ– ದೇವೇಗೌಡರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಶಾಸಕ ಪ್ರೀತಂ ಗೌಡ ಹೆಸರು ಪ್ರಸ್ತಾಪಿಸದೆ ಮಾತನಾಡಿದ ಅವರು, ‘ಸಿ.ಎಂ ಮತ್ತು ಸಚಿವರು ಇನ್ನು ಮುಂದೆ ಬಿಜೆಪಿ ನಾಯಕರ ಮನೆಗೆ ಹೋಗಿ, ಅವರಿಂದಲೇ ಏನುಬೇಕಾದರೂ ಪಡೆದುಕೊಳ್ಳಲಿ. ನಾನು 21 ವರ್ಷ ರಾಜಕೀಯ ಮಾಡಿದ್ದೇನೆ. ಸಾಕಷ್ಟು ನೋಡಿದ್ದೇನೆ.ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ರಾಜಕಾರಣ ಇಲ್ಲಿಗೆ ಮುಗಿಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT