ADVERTISEMENT

ಗೊಬ್ಬರ ಕೊರತೆ; ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:12 IST
Last Updated 3 ಸೆಪ್ಟೆಂಬರ್ 2021, 4:12 IST
ಹಿರೀಸಾವೆ ಹೋಬಳಿಯಲ್ಲಿ ಬೆಳೆದಿರುವ ಒಂದು ತಿಂಗಳ ರಾಗಿ ಪೈರು
ಹಿರೀಸಾವೆ ಹೋಬಳಿಯಲ್ಲಿ ಬೆಳೆದಿರುವ ಒಂದು ತಿಂಗಳ ರಾಗಿ ಪೈರು   

ಹಿರೀಸಾವೆ: ಹೋಬಳಿಯಲ್ಲಿ ಕಳೆದ ನಾಲ್ಕು ದಿನದಿಂದ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಹೋಬಳಿಯಲ್ಲಿ ಜಿಡಿ ಮಳೆಯಾಗಿದೆ. ಬಿತ್ತನೆ ಮಾಡಿದ್ದ ರಾಗಿ, ಮುಸುಕಿನ ಜೋಳಕ್ಕೆ ಈಗ ಅಗತ್ಯವಾಗಿ ಯೂರಿಯಾ ಕೊಡಬೇಕಿದೆ. ಆದರೆ, ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ, ಖಾಸಗಿ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇಲ್ಲ ಎಂಬ ಫಲಕವನ್ನು ಹಾಕಿದ್ದಾರೆ.

‘30 ದಿನದ ರಾಗಿ ಪೈರಿಗೆ, 40 ದಿನದ ಜೋಳದ ಪೈರಿಗೆ ಯೂರಿಯಾ ಹಾಕಿದರೆ, ಉತ್ತಮವಾಗಿ ಬೆಳೆಯುತ್ತದೆ, ಆದರೆ ಯೂರಿಯಾ ಸಿಗುತ್ತಿಲ್ಲ’ ಎನ್ನುತ್ತಾರೆ ರೈತ ಬೆಳಗೀಹಳ್ಳಿ ಪುಟ್ಟರಾಜು.

ADVERTISEMENT

‘ಒಂದು ವಾರದ ಹಿಂದೆ ಯೂರಿಯಾವನ್ನು ಜಿಲ್ಲೆಯ ಎಲ್ಲ ತಾಲ್ಲೂಕಿಗೂ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಯೂರಿಯಾ ಸರಬರಾಜು ಮಾಡುತ್ತಿಲ್ಲ, ಇದರಿಂದ ಜಿಲ್ಲೆಯ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಕೆ. ರಘು ಆರೋಪಿಸಿದರು.

‘ಯೂರಿಯಾಕ್ಕೆ ಹೆಚ್ಚಿನ ಬೇಡಿಕೆ ಇದೆ, ಅಗತ್ಯ ಇರುವಷ್ಟು ಗೊಬ್ಬರವನ್ನು ಹೋಬಳಿಗೆ ಸರಬರಾಜು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಎರಡು ದಿನದಲ್ಲಿ ಹೋಬಳಿಗೆ ಸರಬರಾಜು ಆಗಲಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿಲ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.