ADVERTISEMENT

ಬೇಲೂರು: ಕಾಡುಕೋಣ ಪ್ರತ್ಯಕ್ಷ, ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 2:49 IST
Last Updated 20 ಜನವರಿ 2021, 2:49 IST
ಬೇಲೂರು ತಾಲ್ಲೂಕಿನ ಗೆಂಡೇಹಳ್ಳಿ ಸಮೀಪದಲ್ಲಿ ಮಂಗಳವಾಡ ಕಾಣಿಸಿಕೊಂಡ ಕಾಡುಕೋಣ 
ಬೇಲೂರು ತಾಲ್ಲೂಕಿನ ಗೆಂಡೇಹಳ್ಳಿ ಸಮೀಪದಲ್ಲಿ ಮಂಗಳವಾಡ ಕಾಣಿಸಿಕೊಂಡ ಕಾಡುಕೋಣ    

ಬೇಲೂರು (ಹಾಸನ): ತಾಲ್ಲೂಕಿನ ಗೆಂಡೇಹಳ್ಳಿ ಗ್ರಾಮದ ಸಮೀಪ, ಮಂಗಳವಾರ ಕಾಡುಕೋಣವೊಂದು ಕಾಣಿಸಿಕೊಂಡಿದೆ.

ಈಗಾಗಲೇ ಕಾಡಾನೆಗಳ ಉಪಟಳದಿಂದ ಬೇಸತ್ತ ಕಾಫಿ ಬೆಳೆಗಾರರು ಮತ್ತು ರೈತರು, ಇದೀಗ ಕಾಡುಕೋಣ ಪ್ರತ್ಯಕ್ಷವಾಗಿರುವುದರಿಂದ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.

‘ಕಾಡಾನೆ, ಕಾಡುಹಂದಿ, ಮಂಗ, ನವಿಲುಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ಇದೀಗ ಕಾಡುಕೋಣವೂ ಬಂದಿದ್ದು, ಕಾಡಾನೆಗಳಿಗಿಂತ ಹೆಚ್ಚಿನ ತೊಂದರೆಯಾಗಲಿದೆ’ ಎಂದು ಕಾಫಿ ಬೆಳೆಗಾರ ಶ್ರೀನಿವಾಸ್ ಅಲವತ್ತುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.