ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಶಾಸಕ ಎಚ್.ಡಿ.ರೇವಣ್ಣಅವರ ಕುಟುಂಬಕ್ಕೆ ಶಾಸಕ ಪ್ರೀತಂ ಗೌಡ ಅವರು ಪಂಥಾಹ್ವಾನ ನೀಡಿದ್ದಾರೆ.
‘ಅಭಿವೃದ್ಧಿ, ಬೇರೆ ವಿಚಾರದಲ್ಲಿ ನಮ್ಮ ನಡುವೆ ಮಾತಿನ ಸಂಘರ್ಷ ನಡೆಯುತ್ತಿರುತ್ತೆ. ಹಾಸನಜನರಿಗೆ ಪ್ರೀತಂ ಗೌಡರ ಯೋಚನೆ, ಯೋಜನೆ ಒಪ್ಪಿದೆಯೋ, ಇಲ್ಲವೇ ರೇವಣ್ಣ ಅವರಅಭಿವೃದ್ಧಿ ಶೈಲಿ ಇಷ್ಟವಾಗಿದೆಯೋ ಎಂಬ ಬಗ್ಗೆ ಒಂದು ಸ್ಪರ್ಧೆ ನಡೆದೇ ಬಿಡಲಿ’ ಎಂದು ನಗರದಲ್ಲಿ ಶನಿವಾರ ಸವಾಲು ಹಾಕಿದರು.
‘ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅವರು ಬಂದು ಸ್ಪರ್ಧೆ ಮಾಡಲಿ. ಅವರ ಆಲೋಚನೆಸರಿ ಎಂದರೆ ಜನರು ಅವರಿಗೆ ಮತ ಹಾಕುತ್ತಾರೆ, ಪ್ರೀತಂ ಗೌಡನ ಅಭಿವೃದ್ಧಿ ಕಾರ್ಯಇಷ್ಟವಾದರೆ ನನಗೆ ಮತ ಹಾಕುತ್ತಾರೆ. ಪ್ರೀತಂಗೌಡ ಗೆಲ್ಲಬೇಕೋ, ರೇವಣ್ಣ ಗೆಲ್ಲಬೇಕೋತೀರ್ಮಾನವಾಗಲಿ’ ಎಂದು ಬಹಿರಂಗ ಆಹ್ವಾನ ನೀಡಿದರು.
‘ಒಬ್ಬ ಮಗ ವಿಧಾನ ಪರಿಷತ್ ಸದಸ್ಯ, ಒಬ್ಬ ಮಗ ಸಂಸದ, ಇವರು ಹೊಳೆನರಸೀಪುರಶಾಸಕ. ಅವರ ಕುಟುಂಬದವರೇ ಮುಂದಿನ ಚುನಾವಣೆಯಲ್ಲಿ ಹಾಸನ ವಿಧಾನಸಭಾಕ್ಷೇತ್ರಕ್ಕೆ ಬರುತ್ತಾರೆ ಎಂಬ ಮಾಹಿತಿ ಇದೆ. ನಾನು ಖಂಡಿತವಾಗಿಯೂ ಅವರನ್ನು ಸ್ವಾಗತಮಾಡುತ್ತೇನೆ. ರೇವಣ್ಣ ಅವರು ಬಂದರೂ ಸಂತೋಷ, ಭವಾನಿ ಅಕ್ಕ ಬಂದರೂ ಸಂತೋಷ. ಭವಾನಿ ಅಕ್ಕ ಅಭ್ಯರ್ಥಿ ಎನ್ನುವುದಾದರೆ ನಾಳೆಯೇ ಘೋಷಣೆ ಮಾಡಲಿ.ಚುನಾವಣೆ ಎದುರಿಸಲು ಸಿದ್ಧ’ ಎಂದು ಸ್ಪಷ್ಟಪಡಿಸಿದರು.
ಸಂಕ್ರಾಂತಿ ಬಳಿಕ ಹೊಸ ಪರ್ವ ಶುರುವಾಗಿದೆ. ಹಾಗಾಗಿ ರಾಜಕಾರಣ ಶುರು ಮಾಡುವಂತೆ ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.