ADVERTISEMENT

ಎದೆ ಹಾಲು ಇಲ್ಲದ ನೋವು: ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 9:40 IST
Last Updated 11 ಅಕ್ಟೋಬರ್ 2012, 9:40 IST

ಹಾವೇರಿ: ಮೂರು ತಿಂಗಳ ಮಗುವಿಗೆ ಉಣಿಸಲು ಎದೆ ಹಾಲು ಇಲ್ಲದ್ದನ್ನು ಮನಸ್ಸಿಗೆ ಹಚ್ಚಿಕೊಂಡ ತಾಯಿಯೊಬ್ಬಳು ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಗ್ಗಾವಿಯಲ್ಲಿ ನಡೆದಿದೆ.

ಪಟ್ಟಣದ ಮಂಜುಳಾ ಮುದುಕಣ್ಣ ಶಿರಗುಪ್ಪಿ (22 ವರ್ಷ) ಎಂಬುವಳೇ ಆತ್ಮಹತ್ಯೆ ಮಾಡಿಕೊಂಡ ತಾಯಿ. ತನ್ನ ಚೊಚ್ಚಲ ಹೆರಿಗೆಗಾಗಿ ಏಳು ತಿಂಗಳ ಹಿಂದೆ ತವರಿಗೆ ಆಗಮಿಸಿದ್ದ ಈಕೆ, ಕಳೆದ ಮೂರು  ತಿಂಗಳ ಹಿಂದೆ ಹೆರಿಗೆಯಾಗಿತ್ತು. ಹೆರಿಗೆ ಆದ ನಂತರ ಮಗುವಿಗೆ ಕುಡಿಸಲು ಎದೆ ಹಾಲು ಇಲ್ಲದ್ದಕ್ಕೆ ಬೇಸರಗೊಂಡು ನೇಣು ಹಾಕಿ ಕೊಂಡು ಅತ್ಮಹತ್ಯೆ ಮಾಡಿಕೊಂಡಿ ದ್ದಾಳೆ ಎಂದು ಮೂಲಗಳು ತಿಳಿಸಿವೆ.

ಮೃತಳ ತಾಯಿ ಯಲ್ಲವ್ವ ಬಸವಂತಪ್ಪ ಮತ್ತೂರ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.