ಬ್ಯಾಡಗಿ: ತಾಲ್ಲೂಕಿನ ಮಾಸಣಗಿ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ಚಂದನಾ ಕೆಪ್ಪಲಿಂಗಣ್ಣನವರ ಗುಜರಾತ್ನ ವಡ್ನಗರದಲ್ಲಿ ಮೇ 13ರಿಂದ 17ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪ್ರೇರಣಾ ಉತ್ಸವಕ್ಕೆ ಆಯ್ಕೆಯಾಗಿದ್ಧಾಳೆ.
ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಚಂದನಾಳನ್ನು ಈಚೆಗೆ ಹಾನಗಲ್ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗಿದೆ.
ಪ್ರೇರಣಾ ಉತ್ಸವಕ್ಕೆ ಆಯ್ಕೆಯಾಗಿರುವ ಚಂದನಾಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಶಿಕ್ಷಣ ಸಂಯೋಜಕರಾದ ಬಸವರಾಜ ಸೋಮಕ್ಕಳವರ, ಎಂ.ಎಚ್. ಹಿರೇಮೊರಬ, ಮುಖ್ಯಶಿಕ್ಷಕ ಎಂ.ಡಿ.ಮೋಮಿನ್, ಸಿಬ್ಬಂದಿ ಎಸ್.ಬಿ.ಇಮ್ಮಡಿ, ಎ.ಬಿ.ತಳಮನಿ, ಎಂ.ಎಸ್.ಶಶಿಧರ, ಸುಭಾಸ್ ಕುರಕುಂದಿ, ಎಸ್.ಉಮಾದೇವಿ ಸನ್ಮಾನಿಸಿ ಬೀಳ್ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.