ಅಕ್ಕಿಆಲೂರ: ಹಾನಗಲ್ ತಾಲ್ಲೂಕಿನ ಕೂಸನೂರು ಗ್ರಾಮದ ಆಯುರ್ವೇದ ವೈದ್ಯ ಸುನೀಲ ಹಿರೇಮಠ ತಮ್ಮ ಆಸ್ಪತ್ರೆಯ ವಾರ್ಷಿಕ ಪೂಜಾ ಸಮಾರಂಭದಲ್ಲಿ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪಾವಳಿ ಆಚರಿಸಿದರು.
ಲಕ್ಷ್ಮಿ, ಸರಸ್ವತಿ, ಗಣಪತಿಯ ಚಿತ್ರಗಳೊಂದಿಗೆ ಹನುಮಂತಪ್ಪ ಕೊಪ್ಪದ ಅವರ ಭಾವಚಿತ್ರಕ್ಕೂ ಪೂಜೆ ನೆರವೇರಿಸಲಾಯಿತು. ಹನುಮಂತಪ್ಪ ಹೆಸರಿನಲ್ಲಿ ಹಣತೆ ಹಚ್ಚಿ ಗೌರವ ಸಲ್ಲಿಸಲಾಯಿತು. ಮಾಜಿ ಯೋಧರನ್ನು ಸನ್ಮಾನಿಸಲಾಯಿತು.
ಸುನೀಲ ಹಿರೇಮಠ, ‘ಕುಟುಂಬ ಬಿಟ್ಟು ದೇಶದ ಗಡಿ ಕಾಯುತ್ತಿರುವ ಯೋಧರ ಕಾರ್ಯ ಶ್ಲಾಘನೀಯ. ಹೀಗಾಗಿ ಭಗವಂತನ ಸ್ವರೂಪದಲ್ಲಿ ಯೋಧರನ್ನು ಕಂಡು ಪೂಜೆ ಸಲ್ಲಿಸಲಾಗಿದೆ’ ಎಂದರು.
ಡಾ.ಉಮಾದೇವಿ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.