ADVERTISEMENT

ತಡಸ : ಅಂಗವಿಕಲರ ಸಮನ್ವಯ ವಿಶೇಷ ಸಭೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 13:09 IST
Last Updated 22 ಡಿಸೆಂಬರ್ 2023, 13:09 IST
ತಡಸ ಸಮೀಪದ ಕುನ್ನೂರ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಂಗವಿಕಲರ ಸಮನ್ವಯ ವಿಶೇಷ ಸಭೆ ಜರುಗಿತು
ತಡಸ ಸಮೀಪದ ಕುನ್ನೂರ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಂಗವಿಕಲರ ಸಮನ್ವಯ ವಿಶೇಷ ಸಭೆ ಜರುಗಿತು   

ತಡಸ (ಕುನ್ನೂರ): ಅಂಗವಿಕಲ್ಯ ಶಾಪ ಎಂದು ಭಾವಿಸದೆ ಸಮಾಜದಲ್ಲಿ ಗೌರವಹಿತ ಜೀವನ ನಡೆಸಲು ಮುಂದಾಗಿ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್. ಪಾವಿನ್ ಹೇಳಿದರು.

ಕುನ್ನೂರ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಅಂಗವಿಕಲರ ಸಮನ್ವಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರಿಗೂ ಅವರದ್ದೆ ಅದ ಸ್ಥಾನ ಮಾನ ಇದ್ದು, ಯಾವುದೇ ಹಿಂಜರಿಕೆ ಇಲ್ಲದೆ ಮುಂದೆ ಸಾಗುವ ಕಾರ್ಯ ಮಾಡಿ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಉಪ್ಪಾರ ಮಾತನಾಡಿ, ಸಮ ಸಮಾಜ ನಿರ್ಮಿಸುವಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳೂ ನಡೆದಿವೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಬ್ಯಾಹಟ್ಟಿ ಭರತ ಪಾಟೀಲ, ಗಂಗವ್ವ ಲಮಾಣಿ ಕಾರ್ಯದರ್ಶಿ ಎಂ.ಬಿ. ಕೊಲ್ಲಾಪುರ್, ವಿಕಲಚೇತನರ ಪ್ರತಿನಿಧಿ ಪೀರಪ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.