ರಾಣೆಬೆನ್ನೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶನಿವಾರ ರಾಣೆಬೆನ್ನೂರಿನ ಶಾಸಕ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಅಗಸೀಬಾಗಿಲ ಮಾತನಾಡಿ, ರೈತರು ಹೋರಾಟವನ್ನು ಮುಂದುವರಿಸಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೋರಾಟದ ಭಾಗವಾಗಿ ಬಿಜೆಪಿ ಶಾಸಕರು, ಸಂಸದರ ಮನೆ ಮುಂದೆ ಧರಣಿ ಮಾಡಲಾಗಿದೆ ಎಂದರು.
ಸುರೇಶ ಧುಳೆಹೊಳಿ, ಶಂಕ್ರಪ್ಪ ಮೆಣಸಿನಹಾಳ, ಲೋಕೇಶ ಎಲಿಗಾರ, ನಾಗಪ್ಪ ಎಲಿಗಾರ, ಮಹೇಶಪ್ಪ ಕುಪ್ಪೇಲೂರ, ಶಿದ್ದಪ್ಪ ಕುಪ್ಪೇಲೂರ, ಮಲ್ಲಪ್ಪ ಎಲಿಗಾರ, ಜಗದೀಶಗೌಡ ಪಾಟೀಲ, ಬಸವಂತಪ್ಪ ಅಜ್ಜನವರ, ರಮೇಶಗೌಡ ಕರಬಸಳ್ಳವರ, ಸುರೇಶ ಮೈದೂರ, ಮಂಜುನಾಥ ಕಿರೆಸೂರ, ಬಸರಾಜಪ್ಪ ಕಡೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.