ADVERTISEMENT

ಶಿಗ್ಗಾವಿ | ಗಣೇಶ ವಿಸರ್ಜನೆ: ಡಿಜೆ ಇಲ್ಲದೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:18 IST
Last Updated 3 ಸೆಪ್ಟೆಂಬರ್ 2025, 4:18 IST
   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸೋಮವಾರ ಸಿಂಪಿ ಗಲ್ಲಿ ಭಕ್ತ ಸಮೂಹ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಕೆ ದೂರ ಮಾಡುವ ಮೂಲಕ ಭಜನೆ, ಝಾಂಜ್ ಮೇಳದೊಂದಿಗೆ ಸಾಗಿತು.

ಸಿಂಪಿ ಗಲ್ಲಿ ವಿಠ್ಠಲ ರುಕ್ಮೀಣಿ ದೇವಸ್ಥಾನದಿಂದ ಆರಂಭವಾದ ಗಣೇಶ ಮೂರ್ತಿ ಮೆರವಣಿಗೆಗೆ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ಪುಕಾಳೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮೃದಂಗ, ತಾಳ, ತಂಬೂರಿ, ವೀಣಾವಾದನ, ಭಜನೆಯೊಂದಿಗೆ ಹರಿನಾಮ ಜಪಿಸಿದರು. ಭಕ್ತಿ ಗೀತೆಗಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತ ವೃದ್ಧ ಸಾಮೂಹಿಕ ನೃತ್ಯ ಮಾಡಿದರು.

ಭಕ್ತ ಸಮೂಹ ಒಂದೇ ತರನಾದ ಸಮವಸ್ತ್ರ ಧರಿಸಿದ್ದರು. ಪಾಂಡುರಂಗ ವಿಠ್ಠಲ, ಗಣಪತಿ ಭಪ್ಪ ಮೊರಯಾರೆ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದರು. ಪುರುಷರು ಭಜನೆ ತಾಳಕ್ಕೆ ಸಾಮೂಹಿಕವಾಗಿ ಹೆಜ್ಜೆ ಹಾಕಿದರು. ಮೆರವಣಿಗೆ ಗುಡ್ಡದಚನ್ನಾಪುರ ಕೆರೆ ವರೆಗೆ ಶ್ರದ್ದಾ ಭಕ್ತಿಯಿಂದ ಸಾಗಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಬಂಕಾಪುರ ಪೊಲೀಸ್ ಠಾಣೆಯಿಂದ ಡಿಜಿ ಬಳಕೆ ಮಾಡದ ಗಣೇಶ ಮೂತರ್ಿ ಪ್ರತಿಷ್ಠಾಪನೆ ಸಮಿತಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.

ADVERTISEMENT

ಮುಖಂಡರಾದ ಅಂಬರೀಶ ಸರ್ವದೆ, ರಮೇಶ ಸುಲಾಖೆ, ಭಾನುದಾಸ ಸರ್ವದೆ, ರವಿ ವಣರ್ೇಕರ, ಸತೀಶ ಅವಘಾನ, ಮಹೇಶ ಪುಕಾಳೆ, ರಮೇಶ ಹಂಚಾಟೆ, ರಾಮ ಸುಲಾಖೆ, ಅಶೋಕ ಹಂಚಾಟೆ, ರಾಜು ಸುಲಾಖೆ, ಸುರೇಶ ತೇಲಕರ, ರಾಜು ತೇಲಕರ, ಅಶೋಕ ಕೊಲ್ಲಾಪುರ, ಶ್ಯಾಮ ರಂಪೂರೆ, ಪರಶುರಾಮ ಸುಲಾಖೆ ಸೇರಿದಂತೆ ಸಮಿತಿ ಸದಸ್ಯರು ಇದ್ದರು.

ಭ‘ಾರತೀಯ ಮೂಲಕ ಸಂಸ್ಕೃತಿ ವೈಭವ ಮತ್ತೆ ಮರುಕಳಿಸುವಂತಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಗಣಪತಿ ಮೆರವಣಿಗೆಗೆ ಮೆರಗು ನೀಡಿದ್ದಾರೆ. ಭಜನೆ, ಭಕ್ತಿ ಗೀತೆಗಳು ಜನಮರ ರಂಜಿಸಿದವು. ಡಿಜಿ ಬಳಕೆ ಕಡಿಮೆಯಾಗಬೇಕು’ ಎಂದು ಜಾನಪದ ಕಲಾವಿದ ಗುರು ಚಲವಾದಿ ಹೇಳಿದರು: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸೋಮವಾರ ಸಿಂಪಿ ಗಲ್ಲಿ ಭಕ್ತ ಸಮೂಹ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಕೆ ದೂರ ಮಾಡುವ ಮೂಲಕ ಭಜನೆ, ಝಾಂಜ್ ಮೇಳದೊಂದಿಗೆ ಸಾಗಿತು.

ಸಿಂಪಿ ಗಲ್ಲಿ ವಿಠ್ಠಲ ರುಕ್ಮೀಣಿ ದೇವಸ್ಥಾನದಿಂದ ಆರಂಭವಾದ ಗಣೇಶ ಮೂರ್ತಿ ಮೆರವಣಿಗೆಗೆ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ರಾಮಚಂದ್ರಪ್ಪ ಪುಕಾಳೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮೃದಂಗ, ತಾಳ, ತಂಬೂರಿ, ವೀಣಾವಾದನ, ಭಜನೆಯೊಂದಿಗೆ ಹರಿನಾಮ ಜಪಿಸಿದರು. ಭಕ್ತಿ ಗೀತೆಗಳಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತ ವೃದ್ಧ ಸಾಮೂಹಿಕ ನೃತ್ಯ ಮಾಡಿದರು.

ಭಕ್ತ ಸಮೂಹ ಒಂದೇ ತರನಾದ ಸಮವಸ್ತ್ರ ಧರಿಸಿದ್ದರು. ಪಾಂಡುರಂಗ ವಿಠ್ಠಲ, ಗಣಪತಿ ಭಪ್ಪ ಮೊರಯಾರೆ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದರು. ಪುರುಷರು ಭಜನೆ ತಾಳಕ್ಕೆ ಸಾಮೂಹಿಕವಾಗಿ ಹೆಜ್ಜೆ ಹಾಕಿದರು. ಮೆರವಣಿಗೆ ಗುಡ್ಡದಚನ್ನಾಪುರ ಕೆರೆ ವರೆಗೆ ಶ್ರದ್ದಾ ಭಕ್ತಿಯಿಂದ ಸಾಗಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಬಂಕಾಪುರ ಪೊಲೀಸ್ ಠಾಣೆಯಿಂದ ಡಿಜಿ ಬಳಕೆ ಮಾಡದ ಗಣೇಶ ಮೂತರ್ಿ ಪ್ರತಿಷ್ಠಾಪನೆ ಸಮಿತಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.

ಮುಖಂಡರಾದ ಅಂಬರೀಶ ಸರ್ವದೆ, ರಮೇಶ ಸುಲಾಖೆ, ಭಾನುದಾಸ ಸರ್ವದೆ, ರವಿ ವಣರ್ೇಕರ, ಸತೀಶ ಅವಘಾನ, ಮಹೇಶ ಪುಕಾಳೆ, ರಮೇಶ ಹಂಚಾಟೆ, ರಾಮ ಸುಲಾಖೆ, ಅಶೋಕ ಹಂಚಾಟೆ, ರಾಜು ಸುಲಾಖೆ, ಸುರೇಶ ತೇಲಕರ, ರಾಜು ತೇಲಕರ, ಅಶೋಕ ಕೊಲ್ಲಾಪುರ, ಶ್ಯಾಮ ರಂಪೂರೆ, ಪರಶುರಾಮ ಸುಲಾಖೆ ಸೇರಿದಂತೆ ಸಮಿತಿ ಸದಸ್ಯರು ಇದ್ದರು.

ಭ‘ಾರತೀಯ ಮೂಲಕ ಸಂಸ್ಕೃತಿ ವೈಭವ ಮತ್ತೆ ಮರುಕಳಿಸುವಂತಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಗಣಪತಿ ಮೆರವಣಿಗೆಗೆ ಮೆರಗು ನೀಡಿದ್ದಾರೆ. ಭಜನೆ, ಭಕ್ತಿ ಗೀತೆಗಳು ಜನಮರ ರಂಜಿಸಿದವು. ಡಿಜಿ ಬಳಕೆ ಕಡಿಮೆಯಾಗಬೇಕು’ ಎಂದು ಜಾನಪದ ಕಲಾವಿದ ಗುರು ಚಲವಾದಿ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.