ADVERTISEMENT

ಮನೆ– ಮನೆಗೂ ಗಿಡ ಮರ ಅಭಿಯಾನ ಘೋಷಿಸಿ: ಪ್ರಧಾನಿಗೆ ಪತ್ರ ಬರೆದ ಹಾವೇರಿ ಬಾಲಕಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 15:38 IST
Last Updated 13 ಆಗಸ್ಟ್ 2022, 15:38 IST
ಬಾಲಕಿ ಸಾಧ್ಯಾ ಸಿಂಗ್‌ ರಜಪೂತ್‌
ಬಾಲಕಿ ಸಾಧ್ಯಾ ಸಿಂಗ್‌ ರಜಪೂತ್‌    

ಹಾವೇರಿ: ‘ಮನೆ–ಮನೆಗೂ ಗಿಡ ಮರ’ ಅಭಿಯಾನವನ್ನು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಗರದ ನಾಲ್ಕು ವರ್ಷದ ಬಾಲಕಿ ಸಾಧ್ಯಾ ಸಿಂಗ್‌ ರಜಪೂತ್‌ ಪತ್ರ ಬರೆದಿದ್ದಾಳೆ.

ಪ್ರೀತಿಯ ಮೋದಿಜಿ ಅವರೇ ನೀವು ಘೋಷಿಸಿದ ‘ಹರ್‌ ಘರ್‌ ತಿರಂಗ’ ಅಭಿಯಾನವು ದೇಶದಾದ್ಯಂತ ಜಾರಿಯಾಗಿದೆ. ಅದೇ ರೀತಿ ನೀವು ‘ಹರ್‌ ಘರ್‌ ಪೇಡ್‌ ಪೌದ’ ಅಭಿಯಾನವನ್ನು ಘೋಷಣೆ ಮಾಡಬೇಕು. ಪ್ರತಿ ಮನೆಯಲ್ಲೂ ಸಸಿಗಳನ್ನು ಬೆಳೆಸಿದರೆ ಎಲ್ಲರಿಗೂ ಉತ್ತಮ ಆಮ್ಲಜನಕ ದೊರೆತು, ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.

ಹಾವೇರಿಯ ಅಂಚೆ ಇಲಾಖೆ ಮೂಲಕ ಸ್ವ–ಹಸ್ತಾಕ್ಷರದಲ್ಲಿ ಬರೆದ ಪತ್ರವನ್ನು ಕಳುಹಿಸಿರುವ ಸಾಧ್ಯಾಸಿಂಗ್‌ ಪ್ರಸ್ತುತ ನಗರದ ಸೇಂಟ್‌ ಆ್ಯನ್ಸ್‌ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾಳೆ. ತಂದೆ ಜೀವನಸಿಂಗ್‌ ಅವರು ‘ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ’ದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.