ADVERTISEMENT

‘ಅಗರಬತ್ತಿ ಮಾರಿ ಸಾಲಿ ಕಲಿಸಿದ್ದು ಸಾರ್ಥಕವಾಯ್ತು’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 8:11 IST
Last Updated 14 ಸೆಪ್ಟೆಂಬರ್ 2020, 8:11 IST
ಕುಮಾರ ಕುರಕುಂದ
ಕುಮಾರ ಕುರಕುಂದ   

ಗುತ್ತಲ: ‘ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ಹೋಗಿ ಅಗರಬತ್ತಿ ಮಾರಾಟ ಮಾಡಿ, ಬಂದ ಲಾಭದಲ್ಲಿ ಮಗನಿಗೆ ಶಾಲೆ ಕಲಿಸಿದ್ದು ಸಾರ್ಥಕವಾಯಿತು’ ಎಂದು ಪಿಎಸ್‌ಐ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ 153ನೇ ರ‍್ಯಾಂಕ್‌ ಪಡೆದಿರುವ ಕುಮಾರ ಕುರಗುಂದ ಅವರ ತಾಯಿ ಗೌರಮ್ಮ ‘ಪ್ರಜಾವಾಣಿ’ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಕುಮಾರ ಅವರ ತಂದೆ ಶಿವಪ್ಪ ಪಟ್ಟಣದಲ್ಲಿ ಮನೆ ಮನೆಗೆ ಹೊಗಿ ಕಟ್ಟಿಗೆ ಒಡೆಯುವ ಕೂಲಿ ಕೆಲಸ ಮಾಡುತ್ತಾರೆ. ‘ಮಗ ಪಿಎಸ್‌ಐ ಆಗಿರುವುದು ಬಹಳ ಖುಷಿ ತಂದಿದೆ’ ಎಂದು ಅವರು ಹೇಳಿದರು.

ಪ್ರಾಥಮಿಕ ಶಿಕ್ಷಣವನ್ನು ಪಟ್ಟಣದಲ್ಲಿಯೇ ಮುಗಿಸಿದ ಕುಮಾರ, ಪ್ರೌಢಶಿಕ್ಷಣವನ್ನು ದೇವರಗುಡ್ಡ ಗ್ರಾಮದಲ್ಲಿ, ಪಿಯುಸಿ ಮತ್ತು ಪದವಿಯನ್ನು ಹಾವೇರಿ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಸ್ಪರ್ಧಾ ವಿಜೇತ ಸೆಂಟರ್‌ನಲ್ಲಿ ಮೂರು ತಿಂಗಳು ಪಿಎಸ್‌ಐ ಪರೀಕ್ಷೆಗೆ ತರಬೇತಿ ಪಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.