
ಹಾನಗಲ್: ಸಂಗೀತ ಮತ್ತು ರಂಗಭೂಮಿ ವಿಭಾಗದಲ್ಲಿ ಸಾಧನೆಗಾಗಿ ತಾಲ್ಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ಹಿರಿಯ ರಂಗಕರ್ಮಿ ಮಧುಕುಮಾರ ಹರಿಜನ ಅವರು ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಲ್ಯದಿಂದಲೇ ರಂಗ ಕಲೆಯತ್ತ ಆಕರ್ಷಿತಗೊಂಡ ಮಧುಕುಮಾರ ರಂಗಭೂಮಿಯ ಹಿನ್ನೆಲೆ ಸಂಗೀತ ಮತ್ತು ಚನ್ನಪ್ಪ ಚನ್ನಗೌಡ ಪಾತ್ರದಿಂದ ಈ ಭಾಗದಲ್ಲಿ ಪ್ರಚಲಿತ ಪಡೆದವರು.
ವಿವಿಧ ವಾದ್ಯ ನುಡಿಸುವ ನೈಪುಣ್ಯತೆ ಪಡೆದಿರುವ ಇವರು ಸ್ಥಳೀಯ ಹವ್ಯಾಸಿ ರಂಗ ಕಲಾವಿದರಿಗೆ ತರಬೇತಿ ನೀಡುತ್ತಾರೆ. ಈತನಕ 200 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ವರ್ಷಗಳಿಂದ ‘ಮಧುಕುಮಾರ ಸಂಗೀತ ಕಲಾ ಬಳಗ’ ಸ್ಥಾಪಿಸಿ ಆಸಕ್ತ ಕಲಾವಿದರಿಗೆ ವೇದಿಕೆ ಒದಗಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.