
ಪ್ರಜಾವಾಣಿ ವಾರ್ತೆ
ಶಿಗ್ಗಾವಿ: ತಾಲ್ಲೂಕಿನ ಶ್ಯಾಬಳ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಜಮೀನು ದಾರಿಯನ್ನು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಈಚೆಗೆ ಸುಗಮಗೊಳಿಸಿದರು.
ಗ್ರಾಮದ ರೈತ ಚನ್ನಮಲ್ಲಯ್ಯ ಶಂಕರಯ್ಯ ಹಿರೇಮಠ ಹಾಗೂ ಪ್ರಭು ಶಂಕ್ರಪ್ಪ ದೊಡ್ಮನಿ ಅವರಿಗೆ ಸೇರಿದ ಜಮೀನಿನ ದಾರಿ ಕಳೆದ 5 ವರ್ಷಗಳಿಂದ ದಾರಿ ವಹಿವಾಟು ಹಕ್ಕನ್ನು ನಿರಾಕರಿಸಲಾಗಿತ್ತು.
ರೈತರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದ ಹಿರಿಯರ ಸಮಕ್ಷಮದಲ್ಲಿ ರೈತರ ಸಮಸ್ಯೆ ಬಗೆಹರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.