ADVERTISEMENT

ನಾರಾಯಣಪುರ ಗ್ರಾ.ಪಂ: ಅಧ್ಯಕ್ಷ,ಉಪಾಧ್ಯಕ್ಷ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 2:47 IST
Last Updated 14 ಮೇ 2022, 2:47 IST
ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆ ರಾಜೇಶ್ವರಿ ಬಸವರಾಜ ಬಡಿಗೇರ, ಉಪಾಧ್ಯಕ್ಷ ಗದಿಗಯ್ಯ ಶೇಖರಯ್ಯ ಹಿರೇಮಠ ಅವರನ್ನು ಸಾರ್ವಜನಿಕರು ಶುಕ್ರವಾರ ಸನ್ಮಾನಿಸಿದರು
ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆ ರಾಜೇಶ್ವರಿ ಬಸವರಾಜ ಬಡಿಗೇರ, ಉಪಾಧ್ಯಕ್ಷ ಗದಿಗಯ್ಯ ಶೇಖರಯ್ಯ ಹಿರೇಮಠ ಅವರನ್ನು ಸಾರ್ವಜನಿಕರು ಶುಕ್ರವಾರ ಸನ್ಮಾನಿಸಿದರು   

ಶಿಗ್ಗಾವಿ: ನಾರಾಯಣಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಬಡಿಗೇರ, ಉಪಾಧ್ಯಕ್ಷರಾಗಿ ಗದಿಗಯ್ಯ ಹಿರೇಮಠ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 12 ಜನ ಸದಸ್ಯರನ್ನು ಹೊಂದಿದ್ದು, ಹಿಂದಿನ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಇಚ್ಚಂಗಿ, ಉಪಾಧ್ಯಕ್ಷ ಸಿದ್ಧಲಿಂಗೇಶ್ವರ ಕಲಿವಾರ ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ ವರ್ಗ ಮೀಸಲಾಗಿತ್ತು.

ಚುನಾವಣೆ ಅಧಿಕಾರಿಯಾಗಿ ತಾಲ್ಲೂಕು ಪಂಚಾಯ್ತಿ ಇಒ ಪ್ರಶಾಂತ ತುರ್ಕಾಣಿ, ಚುನಾವಣೆ ಪ್ರಕ್ರಿಯೆಯಲ್ಲಿ ಸಹಾಯಕರಾಗಿ ತಾಪಂ ಎಸ್‌ಡಿಸಿ ಅಶೋಕ ಇಂದೂರ, ಪಿಡಿಒ ಈರಣ್ಣ ಗಾಣಿಗಿ ಕಾರ್ಯ ನಿರ್ವಹಿಸಿದರು.

ADVERTISEMENT

ಅಭಿನಂದನಾ ಸಮಾರಂಭ: ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಆಯ್ಕೆ ಮಾಡಿರುವ ವಾರ್ಡಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಎಂದರು.

ಮುಖಂಡರಾದ ಉಮೇಶ ಅಂಗಡಿ, ಬಿ.ಎಂ.ಕ್ಷೌರದ, ರಮೇಶ ಕಲಿವಾಳ, ಸೋಮನಗೌಡ ಪಾಟೀಲ, ದುಂಡಪ್ಪ ರಾಯಣ್ಣವರ, ರಮೇಶ ಕಲಿವಾಳ, ಬಸವರಾಜ ಬಡಿಗೇರ, ಮೌನೇಶ ಇಚ್ಚಂಗಿ, ಗ್ರಾ.ಪಂ ಸದಸ್ಯರಾದ ಮಂಜುನಾ ಇಚ್ಚಂಗಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.