ADVERTISEMENT

ಕುಮಾರ ಶಿವಯೋಗಿ ದೂರದೃಷ್ಠಿಯುಳ್ಳ ದಾರ್ಶನಿಕರು: ಜಿ.ವಿ. ಕೋರಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:32 IST
Last Updated 18 ಫೆಬ್ರುವರಿ 2026, 7:32 IST
ರಾಣೆಬೆನ್ನೂರಿನ ನಿವೃತ್ತ ನೌಕರರ ಸಭಾ ಭವನದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು 
ರಾಣೆಬೆನ್ನೂರಿನ ನಿವೃತ್ತ ನೌಕರರ ಸಭಾ ಭವನದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು    

ರಾಣೆಬೆನ್ನೂರು: ಹಾನಗಲ್ ಕುಮಾರ ಶಿವಯೋಗಿಗಳು ಸಮಾಜ ಸುಧಾರಣೆಗೆ ಉತ್ತಮ ವಟುಗಳನ್ನು ನಿರ್ಮಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಮಹಾನ್ ಸಿದ್ದಪುರುಷರು, ದೂರದೃಷ್ಠಿಯುಳ್ಳ ದಾರ್ಶನಿಕರು’ ಎಂದು ನಿವೃತ್ತ ಪ್ರೊ. ಜಿ.ವಿ. ಕೋರಿ ಹೇಳಿದರು.

ಇಲ್ಲಿನ ಗೌರಿಶಂಕರ ನಗರ ನಿವೃತ್ತ ನೌಕರರ ಸಭಾಭವನದಲ್ಲಿ ಈಚೆಗೆ ಕದಳಿ ವೇದಿಕೆ ತಾಲ್ಲೂಕು ಘಟಕ, ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ಹಾನಗಲ್ ಕುಮಾರ ಸ್ವಾಮೀಜಿ ಅವರ ಜಯಂತಿ ಹಮ್ಮಿಕೊಂಡಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಗಾಯತ್ರಮ್ಮ ಕುರುವತ್ತಿ, ಎನ್‌.ಎಸ್‌. ಪಾಟೀಲ, ವಾಸಪ್ಪ ಕುಸಗೂರ, ಕದಳಿವೇದಿಕೆ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಬೆನಕಣ್ಣನವರ, ಎಸ್‌.ಕೆ. ನೇಶ್ವಿ, ಎಸ್‌.ಎಚ್‌. ಪಾಟೀಲ ಹಾಗೂ ಸದಸ್ಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.