
ಪ್ರಜಾವಾಣಿ ವಾರ್ತೆ
ರಾಣೆಬೆನ್ನೂರು ತಾಲ್ಲೂಕಿನ ವಡೆರಾಯನಹಳ್ಳಿ ಗ್ರಾಮದ ಯುವಕರು ವಿಜಯನಗರ ಜಿಲ್ಲೆ ಕುರುವತ್ತಿ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಪಾದಯಾತ್ರೆ ಆರಂಭಿಸಿದರು
ರಾಣೆಬೆನ್ನೂರು: ತಾಲ್ಲೂಕಿನ ವಡೆರಾಯನಹಳ್ಳಿ ಗ್ರಾಮದ ಭಕ್ತರು ಕಳೆದ 25 ವರ್ಷಗಳಿಂದ ಕುರುವತ್ತಿ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಯುವಕರು ಪಾದಯಾತ್ರೆ ಆರಂಭಿಸಿದರು.
ಮುಖಂಡರಾದ ಕರಬಸಪ್ಪ ಬಣಕಾರ ಮಾತನಾಡಿ, ‘ಗ್ರಾಮದಿಂದ ಸುಮಾರು 25 ವರ್ಷಗಳಿಂದ ಕುರುವತ್ತಿ ಬಸವೇಶ್ವರ ಜಾತ್ರೆಗೆ ಯುವಕರು ಪಾದಯಾತ್ರೆ ಹೋಗುತ್ತಾರೆ. ದೇಶದ ಗಡಿ ಕಾಯುತ್ತಿರುವ ಯೋಧರು ಆರೋಗ್ಯ ಕಾಪಾಡಲಿ ಎಂಬ ಸಂಕಲ್ಪ ಮಾಡಿಕೊಂಡು ಪಾದಯಾತ್ರೆ ಆರಂಭಿಸಿದ್ದೇವೆ’ ಎಂದರು.
ತಾಲ್ಲೂಕಿನ ಮೆಡ್ಲೇರಿ ಗ್ರಾಮದ ಗುರು ಕೊಟ್ಟೂರೇಶ್ವರ ಖಾನಾವಳಿ ಮಾಲೀಕರು ಪಾದಯಾತ್ರೆ ಯುವಕರಿಗೆ ಪ್ರಸಾದ ವ್ಯವಸ್ಥೆ ನೀಡಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.