ADVERTISEMENT

ಬಹಮನಿ ಫೌಂಡೇಷನ್‌ನ ವಿವಿಧ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 5:32 IST
Last Updated 18 ಅಕ್ಟೋಬರ್ 2021, 5:32 IST
ಕಲಬುರಗಿಯ ಬಹಮನಿ ಫೌಂಡೇಷನ್‌ ಖಿಲ್ಲಾ– ಗುಲಬರ್ಗಾ ವತಿಯಿಂದ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾರ್ಷಿಕ ಪ‍್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರಗಿಯ ಬಹಮನಿ ಫೌಂಡೇಷನ್‌ ಖಿಲ್ಲಾ– ಗುಲಬರ್ಗಾ ವತಿಯಿಂದ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾರ್ಷಿಕ ಪ‍್ರಶಸ್ತಿ ಪ್ರದಾನ ಮಾಡಲಾಯಿತು   

ಕಲಬುರಗಿ: ಇಲ್ಲಿನ ಬಹಮನಿ ಫೌಂಡೇಷನ್‌ ಖಿಲ್ಲಾ– ಗುಲಬರ್ಗಾ ವತಿಯಿಂದ ನಗರದಲ್ಲಿ ಭಾನುವಾರ ಯೋಜಿಸಿದ್ದ ‘7ನೇ ಜಷ್ನೇ ರಹಮತ್‌ ಉಲ್‌ ಲಿಲ್‌ ಅಲ್‌ಅಮೀನ್‌’ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಖಾಜಿ ಮಹಮ್ಮದ್‌ ಹಫೀಜ್‌ ಉಲ್‌ ಹಸನ್‌ ಸಿದ್ದಿಖಿ ಶಹೀದ್‌ ಅವರಿಗೆ ‘ಹಜರತ್‌ ಅಬೂಬಕರ್‌ ಸಿದ್ದಿಖಿ’ ಪ್ರಶಸ್ತಿ, ಶಿಕ್ಷಣ ತಜ್ಞರಾದ ಡಾ.ಶಮೀಮ್‌ ಸುರಯ್ಯ, ಡಾ.ಸಯ್ಯದ್‌ ರಹಮತ್‌ ಉಲ್ಲಾ, ಪತ್ರಕರ್ತ ಮಹಮ್ಮದ್‌ ಅಬ್ದುಲ್‌ ಹಕೀಮ್‌ ಶಕೀರ್‌ ಹಾಗೂ ನಿವೃತ್ತ ಪ್ರಾಂಶುಪಾಲರಾದ ಕಮಲಾದೇವಿ ಶುಕ್ಲಾ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಲಾಯಿತು.

ಅಲ್ಲದೇ, ‘ಗುಲಬರ್ಗಾ ಅನ್ಮೋಲ್‌ ರತ್ನ ಅವಾರ್ಡ್‌’ ಅನ್ನು ಮಕ್ಕಳತಜ್ಞ ಡಾ.ರಮೇಶ ಯಳಸಂಗಿಕರ, ಹಿರಿಯ ವಕೀಲ ಡಾ.ಮಖ್ಸೂದ್‌ ಅಪ್ಜಲ್‌ ಜಾಗೀರ್ದಾರ್, ಸಾಹಿತಿ ಮಹಮ್ಮದ್‌ ಅಮ್ದದ್‌ ಹುಸೇನ್‌ ಜಾವೀದ್‌, ಇತಿಹಾಸ ತಜ್ಞ ಡಾ.ಶಶಿಶೇಖರ ರೆಡ್ಡಿ, ಶಾಯರಿ ಬರಹಗಾರ ನೂರುದ್ದೀನ್‌ ನೂರ್‌, ಹಿರಿಯ ಕಲಾವಿದರಾದ ಡಾ.ಎಸ್.ಎಂ. ನೀಲಾ, ಉಪನ್ಯಾಸಕರಾದ ಡಾ.ಅನೀಸ್‌ ಸಿದ್ದಿಖಿ, ಸಯ್ಯದ್‌ ಶಾ ಫರೀದುದ್ದಿನ್‌ ಸಖಿ ಸರಮಸ್ತ್‌, ವಿಜ್ಞಾನ ಶಿಕ್ಷಕರಾದ ನವೀದ್‌ ಅಂಜುಮ್‌ ಅವರಿಗೆ ಪ್ರದಾನ ಮಾಡಲಾಯಿತು.

ADVERTISEMENT

‌ಬಹಮನಿ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ಖಾಜಿ ರಿಜ್ವಾನ್‌ ಉರ್‌ ರಹಮಾನ್‌ ಸಿದ್ದಿಖಿ ಮಶೂದ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಜರತ್‌ ಡಾ.ಶಾ ಮೊಹಮ್ಮದ್ ಅಫಜಲುದ್ದೀನ್‌ ಜುನೈದಿ ಸಿರಾಜ್‌ ಬಾಬಾ, ಹಜರತ್‌ ಸಯ್ಯದ್‌ ಶಾ ಯದುಲ್ಲಾಹ್‌ ಹುಸೇನಿ ನಿಜಾಮ್ ಬಾಬಾ, ಮೊಹಮ್ಮದ್‌ ಅಜೀಮುದ್ದೀನ್‌, ಖಾಜಿ ಹಫೀಜ್‌ ಉಲ್‌ ಹಸನ್‌ ಸಿದ್ದಿಖಿ, ಅಬ್ದುಲ್‌ ಅಜೀಜ್‌ ರಾಜಪೂತ್‌ ಚಿಸ್ತ್ರಿ, ಸಯ್ಯದ್‌ ಮಜರ್‌ ಹುಸೇನ್‌, ಫಾದರ್‌ ಸ್ಟ್ಯಾನಿ ಲೋಬೊ, ಭಾಯಿದೀಫ್‌ ಸಿಂಗ್‌ ಆಗಮಿಸಿದ್ದರು. ಫೌಂಡೇಷನ್‌ನ ಎಲ್ಲ ಸದಸ್ಯರು, ಪ್ರಶಸ್ತಿ ಪುರಸ್ಕೃತರ ಕುಟುಂಬ ವರ್ಗದವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.