ADVERTISEMENT

ದೇವಾಂಗ ಜನಾಂಗಕ್ಕೆ ನೆರವು: ಭರವಸೆ

ಕಾಳಗಿ: ಕಳಸಾರೋಹಣ, ಕಲ್ಯಾಣ ಮಂಟಪ ಉದ್ಘಾಟಸಿದ ಸಂಸದ ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:42 IST
Last Updated 2 ಡಿಸೆಂಬರ್ 2019, 9:42 IST
ಕಾಳಗಿ ಬನಶಂಕರಿ ದೇವಸ್ಥಾನದ ಸಮಾರಂಭದಲ್ಲಿ ಗೋಪುರ ನಿರ್ಮಾಣದ ದಾನಿ ನಾಗಣ್ಣ ಕಮರಡ್ಡಿ ದಂಪತಿಗೆ ‘ಶ್ರೀರಕ್ಷಾ’ ಪತ್ರ ನೀಡಿ ಸನ್ಮಾನಿಸಲಾಯಿತು
ಕಾಳಗಿ ಬನಶಂಕರಿ ದೇವಸ್ಥಾನದ ಸಮಾರಂಭದಲ್ಲಿ ಗೋಪುರ ನಿರ್ಮಾಣದ ದಾನಿ ನಾಗಣ್ಣ ಕಮರಡ್ಡಿ ದಂಪತಿಗೆ ‘ಶ್ರೀರಕ್ಷಾ’ ಪತ್ರ ನೀಡಿ ಸನ್ಮಾನಿಸಲಾಯಿತು   

ಕಾಳಗಿ (ಕಲಬುರ್ಗಿ ಜಿಲ್ಲೆ: ‘ನೇಕಾರ (ದೇವಾಂಗ) ಜನಾಂಗಕ್ಕೆ ಏನೇ ಅನುಕೂಲತೆ ಬೇಕಾಗಿದ್ದರೆ ತಾವು ಸ್ಪಂದಿಸುವುದಾಗಿ ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಭಾನುವಾರ ಇಲ್ಲಿ ಭರವಸೆ ನೀಡಿದರು.

ಬನಶಂಕರಿ ದೇವಸ್ಥಾನದ ಗೋಪುರದ ಕಳಸಾರೋಹಣ ಮತ್ತು ಕಲ್ಯಾಣ ಮಂಟಪ ಉದ್ಘಾಟನೆಯ ಬಳಿಕ ಧಾರ್ಮಿಕ ಚಿಂತನಾ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ದೇವರ ದಾಸಿಮಯ್ಯ ಜಯಂತಿ ಜಾರಿಗೆ ತಂದಿದೆ. ನೇಕಾರರ ಸಾಲ ಮನ್ನಾ ಮಾಡಿ ಜನಾಂಗದ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ತಾವೂ ಸಹ ಸರ್ಕಾರದ ಪ್ರತಿ ಸಭೆಯಲ್ಲಿ ಈ ಜನಾಂಗದ ಅಭಿವೃದ್ಧಿಗೆ ಪೂರಕವಾಗಬಲ್ಲ ಯೋಜನೆಗಳನ್ನು ರೂಪಿಸಲು ಧ್ವನಿ ಎತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ದೇವಾಂಗ ಸಮಾಜದ ಉಪಯೋಗಕ್ಕಾಗಿ ಪ್ರವಾಸೋದ್ಯಮ ಇಲಾಖೆಯಡಿ ₹25 ಲಕ್ಷದ ಯಾತ್ರಿ ನಿವಾಸದ ಮಂಜೂರಾತಿಗೆ ಪ್ರಯತ್ನ ಮಾಡುವೆ’ ಎಂದು ಆಶ್ವಾಸನೆ ನೀಡಿದರು.

ಸಾನ್ನಿಧ್ಯ ವಹಿಸಿದ ಹಂಪಿ ಹೇಮಕೂಟ ಮಹಾ ಸಂಸ್ಥಾನ ಗಾಯತ್ರಿ ಪೀಠದ ದಯಾನಂದಪುರಿ ಮಹಾ ಸ್ವಾಮೀಜಿ ಅವರು ಕಳಸಾರೋಹಣ ನೆರವೇರಿಸಿ, ಕಲ್ಯಾಣಮಂಟಪ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಕ್ಕಲಕೋಟ ಮಠದ ಚಿಕ್ಕರೇವಣಸಿದ್ದ ಶಿವಶರಣರು, ಭರತನೂರಿನ ಚಿಕ್ಕ ಗುರುನಂಜೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮೈಂದರ್ಗಿ ಮಠದ ಅಭಿನವ ರೇವಣಸಿದ್ಧ ಶಿವಶರಣರು, ಸುಗೂರಿನ ಪವನದಾಸ ಮಹಾರಾಜ, ದೇವಾಂಗಮಠದ ಶಂಕ್ರಯ್ಯಸ್ವಾಮಿ, ಗೊಬ್ಬೂರವಾಡಿ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಮುಖಂಡ ರವೀಂದ್ರ ಕಲಬುರ್ಗಿ, ಚಂದ್ರಶೇಖರ ಸುಲ್ತಾನಪುರ, ಡಾ.ರಮೇಶ ಮಾಳಾ, ವಿನೋದಕುಮಾರ ಜನೆವಾರ, ರಾಜಶೇಖರ ಕುದೂರ, ವಿಜಯಕುಮಾರ ಬಾಪ್ರೆ, ಚಂದ್ರಕಾಂತ ಜಾಧವ, ರಮೇಶ ಕಿಟ್ಟದ, ನಿಂಬೆಣ್ಣಪ್ಪ ಕೋರವಾರ, ಅಬ್ದುಲ್ ಜಬ್ಬರ ಸಾಗರ, ರತ್ನಮ್ಮ ಗುತ್ತೇದಾರ, ಶಿವಲೀಲಾ ಸಲಗೂರ, ಭೀಮಬಾಯಿ ಕಣ್ಣಿ, ನಾಗರಾಜ ಹಾವಗುಂಡಿ, ನಾಗರಾಜ ಕೊರವಿ, ಅಗಳಿ ಪಂಪಾಪತಿ, ಭೀಮಾಶಂಕರ ರಾಜಗೊಂಡೆ, ರಾಮು ರಾಠೋಡ ವೇದಿಕೆಯಲ್ಲಿ ಇದ್ದರು.

ಬಾಲಚಂದ್ರ ಕಾಂತಿ ಅಧ್ಯಕ್ಷತೆ ವಹಿಸಿದ್ದರು. ಶಿವಲೀಲಾ ಅಷ್ಟಗಿ ಪ್ರಾರ್ಥಿಸಿದರು. ಸಿದ್ದಾರೆಡ್ಡಿ ಸಂಗೋಳಗಿ ನಿರೂಪಿಸಿದರು. ಹಣಮಂತ ಕಣ್ಣಿ ಸ್ವಾಗತಿಸಿದರು. ಹನುಮಂತಪ್ಪ ಕಾಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.