ADVERTISEMENT

ಬೌದ್ಧಧರ್ಮ ನೆಲೆಯೂರಲು ಅಂಬೇಡ್ಕರ್‌ ಕಾರಣ: ಡಾ.ರಮೇಶ ಲಂಡನಕರ

ಧಮ್ಮಚಕ್ರ ಪ್ರವರ್ತನ ದಿನಾಚರಣೆ, ಕವಿಗೋಷ್ಠಿಯಲ್ಲಿ ಡಾ.ರಮೇಶ ಲಂಡನಕರ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 5:28 IST
Last Updated 18 ಅಕ್ಟೋಬರ್ 2021, 5:28 IST
ಕಲಬುರಗಿಯಲ್ಲಿ ಧಮ್ಮಚಕ್ರ ಪ್ರರ್ವತನ ದಿನಾಚರಣೆ ಅಂಗವಾಗಿ ಈಚೆಗೆ ಆಯೋಜಿಸಿದ್ದ ಕವಿಗೋಷ್ಠಿಯನ್ನು ಡಾ.ರಮೇಶ ಲಂಡನಕರ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಈಶ್ವರ ಇಂಗಿನ, ಡಾ.ಸದಾನಂದ ಪೆರ್ಲ, ಸಿದ್ಧಾರ್ಥ ಚಿಮ್ಮಾಇದ್ಲಾಯಿ, ಧರ್ಮಣ್ಣ ಧನ್ನಿ ಇದ್ದರು
ಕಲಬುರಗಿಯಲ್ಲಿ ಧಮ್ಮಚಕ್ರ ಪ್ರರ್ವತನ ದಿನಾಚರಣೆ ಅಂಗವಾಗಿ ಈಚೆಗೆ ಆಯೋಜಿಸಿದ್ದ ಕವಿಗೋಷ್ಠಿಯನ್ನು ಡಾ.ರಮೇಶ ಲಂಡನಕರ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದರು. ಈಶ್ವರ ಇಂಗಿನ, ಡಾ.ಸದಾನಂದ ಪೆರ್ಲ, ಸಿದ್ಧಾರ್ಥ ಚಿಮ್ಮಾಇದ್ಲಾಯಿ, ಧರ್ಮಣ್ಣ ಧನ್ನಿ ಇದ್ದರು   

ಕಲಬುರಗಿ: ‘ವೈಜ್ಞಾನಿಕ ಮತ್ತು ಮಾನವೀಯ ನೆಲೆಯಲ್ಲಿ ರೂಪಿತಗೊಂಡ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಡಾ.ಅಂಬೇಡ್ಕರ್‌ ಅವರು ಮತ್ತೆ ಭಾರತದಲ್ಲಿ ಈ ಧರ್ಮ ನೆಲೆಯೂರಲು ಕಾರಣವಾದರು’ ಎಂದು ‌ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ ಲಂಡನಕರ ಅಭಿಪ್ರಾಯಪಟ್ಟರು.

65ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಪ್ರಯುಕ್ತ ನಗರದ ನಾಗಮಾಣಿಕ್ಯ ಎಂಎಸ್‌ಡಬ್ಲ್ಯೂ ಕಾಲೇಜಿನಲ್ಲಿ ಈಚೆಗೆ ದೇವಿಂದ್ರಪ್ಪ ಜಿ.ಸಿ. ಸಂಗೀತ, ಸಾಹಿತ್ಯ, ಕಲಾ ಸಂಸ್ಥೆ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧನ ಪ್ರಜ್ಞೆ, ಶೀಲ, ಕರುಣೆ, ಶಾಂತಿಯ ಮೌಲ್ಯಗಳು ಪಾಲನೆಯಾಗಬೇಕು. ಅಂಬೇಡ್ಕರ್‌ ಅವರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ವಿಚಾರಗಳು ಆದರ್ಶವಾಗಬೇಕು. ಈ ದಿಸೆಯಲ್ಲಿ ಕವಿ– ಕಾವ್ಯ ಬೆಳಕು ಚೆಲ್ಲಲಿ’ ಎಂದರು.

ADVERTISEMENT

‌ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಸದಾನಂದ ಪೆರ್ಲ ಮಾತನಾಡಿ, ‘ಜಾತಿರಹಿತ, ವರ್ಗರಹಿತ ಸಮಾಜದ ತಳಹದಿಯ ಮೇಲಯೇ ಪ್ರಬುದ್ಧ ಭಾರತ ನಿರ್ಮಿಸುವುದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಕನಸಾಗಿತ್ತು. ಸಾಂವಿಧಾನಿಕ ಆಶಯಗಳು ಅನುಷ್ಠಾನಗೊಂಡಾಗ ಮಾತ್ರ ಇದು ನನಸಾಗುತ್ತದೆ’ ಎಂದರು.

‌‘ಬುದ್ಧನ ಆದರ್ಶಗಳನ್ನು ಅಳವಡಿಸಿಕೊಂಡು ಬೌದ್ಧ ಧರ್ಮ ಸ್ವೀಕರಿಸಿದ ಅಂಬೇಡ್ಕರ್‌ ಅವರು ಸಂವಿಧಾನದಡಿ ಎಲ್ಲರಿಗೂ ಸಮಾನತೆಯ ಬದುಕು ಕಟ್ಟಿಕೊಟ್ಟಿದ್ದಾರೆ. ಇಂದು ಅಂಬೇಡ್ಕರ್‌ ಅವರು ಇಲ್ಲದ ಭಾರತ ಶೂನ್ಯವಾಗಿದೆ. ಸಶಕ್ತ ಸಮಾಜ ನಿರ್ಮಿಸಲು ಬುದ್ಧ, ಬಸವ, ಡಾ.ನಾರಾಯಣ ಗುರುಗಳ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು.

ಸಾಹಿತಿ ಧರ್ಮಣ್ಣ ಎಚ್. ಧನ್ನಿ, ನಿವೃತ್ತ ಪ್ರಾಚಾರ್ಯ ಈಶ್ವರ ಇಂಗಿನ, ಪ್ರಾಂಶುಪಾಲ ಮಹೇಶಕುಮಾರ ಮಾಡಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾಇದ್ಲಾಯಿ ಮಾತನಾಡಿದರು. ಸಿದ್ಧಲಿಂಗ
ಮಾಹೂರ ಹಾಗೂ ತಂಡದವರಿಂದ ಪ್ರಾರ್ಥನೆ ಗೀತೆ ನಡೆಯಿತು. 16 ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.

ಕವಿಗಳಾದ ವಿ.ಆರ್. ಚಾಂಬಾಳ, ರೇಣುಕಾ ಶ್ರೀಕಾಂತ, ಎಂ.ಎನ್. ಸುಗಂಧಿ, ಎಂ.ಪಿ. ಪ್ರಕಾಶ ಸರಸಂಬಿ, ಎಂ.ಬಿ. ನಿಂಗಪ್ಪ, ಶರಣರೆಡ್ಡಿ ಎಸ್. ಕೋಡ್ಲಾ, ಡಾ.ರಾಜಶೇಖರ ಮಾಂಗ, ಕವಿತಾ ರಾಠೋಡ, ಸಿದ್ದರಾಮ ಸರಸಂಬಿ, ಸಂಗಮ್ಮ ಧಮ್ಮೂರಕರ, ಕಾಶೀನಾಥ ಮುಖರ್ಜಿ, ಸಾವಿತ್ರಿ ಉದಯಕರ್, ವಿಜಯಲಕ್ಷ್ಮೀ ಗುತ್ತೇದಾರ, ಶಿವಶಂಕರ ಬಿಳಾಲಕರ ಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.