ಕಲಬುರ್ಗಿ: ಗುಲಬರ್ಗಾ ಮೀಸಲು ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಡಾ.ಉಮೇಶ ಜಾಧವ, ದೆಹಲಿಯ ಸಂಸತ್ ಭವನ ಪ್ರವೇಶಿಸುವ ಮುನ್ನ ಸಾಷ್ಟಾಂಗ ನಮಸ್ಕಾರ ಮಾಡಿದರು.
ಮೋದಿ ಸಂಪುಟದಲ್ಲಿ ಅವರು ಸಚಿವರಾಗುತ್ತಾರೆ ಎಂದು ಬಲವಾಗಿ ನಂಬಿದ್ದ 50ಕ್ಕೂ ಹೆಚ್ಚು ಬೆಂಬಲಿಗರು ದೆಹಲಿಗೆ ತೆರಳಿದ್ದರು.
ಸಂಸತ್ ಭವನ ತೋರಿಸಲು ಅವರನ್ನು ಕರೆದೊಯ್ದಿದ್ದ ಜಾಧವ, ಸಂಸತ್ತಿನ ಮುಖ್ಯದ್ವಾರದ ಬಳಿ ಸಾಷ್ಟಾಂಗ ನಮಸ್ಕಾರ ಮಾಡಿದರು ಎಂದು ಅವರ ಜೊತೆಗಿದ್ದವರು ತಿಳಿಸಿದರು.
ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಜಾಧವ ಇದೇ ರೀತಿ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ಮತಕೋರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.