ADVERTISEMENT

ಮುಖ್ಯಮಂತ್ರಿ ಬಳಿ ನಿಯೋಗ: ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:47 IST
Last Updated 9 ಆಗಸ್ಟ್ 2019, 19:47 IST
ಅಫಜಲಪುರ ತಾಲ್ಲೂಕಿನ ಕುಡಿ ಗನೂರು ಗ್ರಾಮದ ಹತ್ತಿರ ಶುಕ್ರವಾರ ಪ್ರವಾಹಕ್ಕೆ ತುತ್ತಾಗಿರುವ ಕಬ್ಬಿನ ಬೆಳೆ
ಅಫಜಲಪುರ ತಾಲ್ಲೂಕಿನ ಕುಡಿ ಗನೂರು ಗ್ರಾಮದ ಹತ್ತಿರ ಶುಕ್ರವಾರ ಪ್ರವಾಹಕ್ಕೆ ತುತ್ತಾಗಿರುವ ಕಬ್ಬಿನ ಬೆಳೆ   

ಅಫಜಲಪುರ: ‘ನೆರೆ ಹಾವಳಿ ಪರಿಹಾರದ ಬಗ್ಗೆ ಮನವರಿಕೆ ಮಾಡಲು ಶೀಘ್ರ ಮುಖ್ಯಮಂತ್ರಿ ಬಳಿ ನಿಯೋಗ ಕರೆದುಕೊಂಡು ಹೋಗಲಾಗುವುದು’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.

ತಾಲ್ಲೂಕಿನ ಮಣೂರು ಉಡಚಾಣ ಘತ್ತರಗಿ ಗ್ರಾಮಗಳಲ್ಲಿ ನೆರೆ ವೀಕ್ಷಿಸಿ ಮಾತನಾಡಿದ ಅವರು, ‘ಸದ್ಯ ಅಪಾರ ಹಾನಿ ಸಂಭವಿಸಿದ ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಮುಖ್ಯಮಂತ್ರಿಗಳು ಗಮನ ಹರಿಸಿದ್ದಾರೆ. ಇಲ್ಲಿನ ರೈತರು, ಜನರ ಪರಿಸ್ಥಿತಿಯನ್ನೂ ಅವರಿಗೆ ಮನವರಿಕೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT