ADVERTISEMENT

ಬಸವ ಜಯಂತಿ ಅಂಗವಾಗಿ ಉಪಾಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 5:19 IST
Last Updated 14 ಮೇ 2021, 5:19 IST
ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಜಿಮ್ಸ್ ಆವರಣದಲ್ಲಿರುವ ರೋಗಿಗಳ ಸಂಬಂಧಿಕರಿಗೆ ಉಪಾಹಾರದ ಪ್ಯಾಕೆಟ್ ವಿತರಿಸಲಾಯಿತು
ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಜಿಮ್ಸ್ ಆವರಣದಲ್ಲಿರುವ ರೋಗಿಗಳ ಸಂಬಂಧಿಕರಿಗೆ ಉಪಾಹಾರದ ಪ್ಯಾಕೆಟ್ ವಿತರಿಸಲಾಯಿತು   

ಕಲಬುರ್ಗಿ: ಬಸವ ಜಯಂತಿ ಅಂಗವಾಗಿ ಡಾ.ಶರಣಕುಮಾರ ಮೋದಿ ಪ್ರತಿಷ್ಠಾನ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಜಿಮ್ಸ್‌ನ ಹೊರಭಾಗದಲ್ಲಿ ರೋಗಿಗಳ ಸಂಬಂಧಿಕರಿಗೆ ಉಪಾಹಾರ, ಹಣ್ಣು ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ಸುಮಾರು 600 ಪ್ಯಾಕೆಟ್ ಉಪಾಹಾರದ ಪ್ಯಾಕೆಟ್‌ಗಳನ್ನು ಪ್ರತಿಷ್ಠಾನದ ಉಪಾಧ್ಯಕ್ಷ ಭೀಮಾಶಂಕರ ಮೀಟೇಕಾರ, ಮಲ್ಲಿಕಾರ್ಜುನ ಮೋದಿ ಅವರು ವಿತರಿಸಿದರು. ಈ ಉಚಿತ ಉಪಾಹಾರ ಸೇವೆಯು ಲಾಕ್ ಡೌನ್ ಮುಗಿಯುವವರೆಗೆ ಇರುತ್ತದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಜಯವರ್ಧನ ಅಂಬಲಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT