
ಕಲಬುರಗಿ ಜಿಲ್ಲೆಯಲ್ಲಿ ಕೆಕೆಆರ್ಡಿಬಿ ಯೋಜನೆಯ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಗೆಯ ಅರಿವು ಕೇಂದ್ರದ ವಿನ್ಯಾಸ
ಕಲಬುರಗಿ: ಗ್ರಾಮೀಣ ಭಾಗದ ಯುವ ಜನರನ್ನು ಓದಿನತ್ತ ಆಕರ್ಷಿಸಲು ಜಿಲ್ಲೆಯಲ್ಲಿ ನವೀನ ಬಗೆಯ 41 ‘ಅರಿವು ಕೇಂದ್ರಗಳು’ ತಲೆಎತ್ತುತ್ತಿವೆ.
‘ಕಟ್ಟೆಗಳಲ್ಲಿ ಕುಳಿತು ಹರಟುವ ಯುವಕರು, ಚಿಣ್ಣರನ್ನು ಓದಿನತ್ತ ಸೆಳೆಯುವ, ಗುಣಮಟ್ಟದ ಚರ್ಚೆಗೆ ವೇದಿಕೆ ಒದಗಿಸುವ, ಗ್ರಾಮೀಣ ಜನರ ಜ್ಞಾನಮಟ್ಟ ವೃದ್ಧಿಸುವ ಆಶಯವನ್ನು ಈ ಅರಿವು ಕೇಂದ್ರಗಳು ಹೊಂದಿವೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮ್ಯಾಕ್ರೊ ಯೋಜನೆಯಡಿ ಒಟ್ಟು ₹11 ಕೋಟಿ ವೆಚ್ಚದಲ್ಲಿ ತಲಾ 40x60 ಅಡಿ ವಿಸ್ತೀರ್ಣದಲ್ಲಿ ಜಿಲ್ಲೆಯಲ್ಲಿ 30 ಗ್ರಾಮ ಪಂಚಾಯಿತಿಗಳಲ್ಲಿ ಈ ಅರಿವು ಕೇಂದ್ರಗಳ ನಿರ್ಮಾಣ ಸಾಗಿದೆ. ಕೆಆರ್ಐಡಿಎಲ್ ನಿರ್ಮಾಣದ ಹೊಣೆ ಹೊತ್ತಿದೆ.
ಆಳಂದ, ಸೇಡಂ ತಾಲ್ಲೂಕಿನಲ್ಲಿ ತಲಾ ಐದು, ಅಫಜಲಪುರ, ಚಿತ್ತಾಪುರ, ಕಮಲಾಪುರ, ಜೇವರ್ಗಿ ತಾಲ್ಲೂಕಿನಲ್ಲಿ ತಲಾ ನಾಲ್ಕು, ಚಿಂಚೋಳಿ ತಾಲ್ಲೂಕಿನಲ್ಲಿ ಮೂರು ಹಾಗೂ ಯಡ್ರಾಮಿ ತಾಲ್ಲೂಕಿನ ಕುಕನೂರು ಗ್ರಾಮ ಪಂಚಾಯಿತಿಯಲ್ಲಿ ಈ ಹೊಸ ಬಗೆಯ ಅರಿವು ಕೇಂದ್ರಗಳು ತಲೆಎತ್ತಲಿವೆ.
‘ಚಿತ್ತಾಪುರದಲ್ಲಿ 3, ಅಫಜಲಪುರ ದಲ್ಲಿ 2, ಆಳಂದ, ಶಹಾಬಾದ್, ಯಡ್ರಾಮಿ, ಜೇವರ್ಗಿ, ಕಮಲಾಪುರ ಹಾಗೂ ಕಲಬುರಗಿಯಲ್ಲಿ ತಲಾ ಒಂದೊಂದು ಪಂಚಾಯಿತಿಗಳಲ್ಲಿ ಈ ಅರಿವು ಕೇಂದ್ರಗಳು ತಲೆಎತ್ತಲಿವೆ. ಮುಂಬರುವ ಮಾರ್ಚ್ ಹೊತ್ತಿಗೆ ಇವುಗಳ ಕಾಮಗಾರಿ ಪೂರ್ಣಗೊಳ್ಳ
ಲಿದೆ’ ಎಂಬುದು ಅಧಿಕಾರಿಗಳ ವಿಶ್ವಾಸ.
‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ₹3 ಕೋಟಿ ಅನುದಾನದಲ್ಲಿ 100 ಅರಿವು ಕೇಂದ್ರಗಳ ದುರಸ್ತಿ, ಜೀರ್ಣೋದ್ಧಾರ ಮಾಡಲಾಗಿದೆ. ಪೀಠೋಪಕರಣ, ಹೊಸ ಪುಸ್ತಕಗಳು, ಚಿತ್ತಾಕರ್ಷಕ ತಾರಸಿ, ಮಕ್ಕಳ ಸ್ನೇಹಿ ವರ್ಣಚಿತ್ರ ಸೇರಿ ಡಿಜಿಟಲ್ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ಸಿಂಗ್ ಮೀನಾ.
‘ಇದಲ್ಲದೇ, ₹2.50 ಕೋಟಿ ವೆಚ್ಚದಲ್ಲಿ 235 ಗ್ರಂಥಾಲಯಗಳಿಗೆ ಪೀಠೋಪಕರಣ ಒದಗಿಸಲಿದ್ದು, ₹77 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಖರೀದಿಸಿ ಒದಗಿಸಲಾಗಿದೆ ಎಂದರು.
ಅರಿವು ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಪುಸ್ತಕ, ಡಿಜಿಟಲ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 3 ಸಾವಿರ ಡೆಸ್ಕ್ಟಾಪ್ ಖರೀದಿಸಲಾಗಿದೆಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.