ಕಲಬುರಗಿ: ಜಿಲ್ಲೆಯ ಐವರು ಕರಾಟೆ ಪಟುಗಳು ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಶಿಟೊ ರಿಯು ಕರಾಟೆ ಚಾಂಪಿಯನ್ಷಿಪ್ಗೆ ಆಯ್ಕೆಯಾಗಿದ್ದಾರೆ.
ಗಜಾನನ ಬಿಕುಲಾಲ್ (40– 50 ವರ್ಷದೊಳಗಿನವರ ವಿಭಾಗ), ದಿಲೀಪ್ ಕುಮಾರ್ ಚೌಹಾಣ (21–39 ವರ್ಷ), ಭಾಗ್ಯಶ್ರೀ ಗುರಪ್ಪ, ರಂಜಿತಾ ನಾಥನೇಲ್ ಚೌಹಾಣ (21 ವರ್ಷಕ್ಕಿಂತ ಮೇಲಿನವರ ವಿಭಾಗ), ಎಂ. ಡಿ. ಅರ್ಫಾತ್ ಬಹದ್ದೂರ್ (17 ವರ್ಷದೊಳಗಿನವರು) ಆಯ್ಕೆಯಾದವರು.
ಜಕಾರ್ತದಲ್ಲಿ ಸೆಪ್ಟೆಂಬರ್ 22ರಿಂದ 24ರವರೆಗೆ ಚಾಂಪಿಯನ್ಷಿಪ್ ನಡೆಯಲಿದೆ. ಕಲಬುರಗಿಯ ಜಿಲ್ಲೆಯ ಜೆನ್ ಶಿಟೊ ರಿಯು ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿದಾರ ಶಿಹಾನ್ ದಶರಥ ಧುಮ್ಮನಸೂರ, ಮೊಹಮ್ಮದ್ ಖುರ್ರಂ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.