ADVERTISEMENT

ಪಕ್ಷದಲ್ಲಿ ಒಳ್ಳೆಯದಾದರೆ ನಂದು, ಕೆಟ್ಟದ್ದಾದರೆ ನಿಂದು ಎನ್ನುವವರಿದ್ದಾರೆ: ಖರ್ಗೆ

ಜಿ–23 ನಾಯಕರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 5:15 IST
Last Updated 18 ಮಾರ್ಚ್ 2022, 5:15 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ‘ಒಳ್ಳೆಯದಾದರೆ ನಂದು, ಕೆಟ್ಟದ್ದಾದರೆ ನಿಂದು’ ಎನ್ನುವ ಕೆಲ ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ. ಪಕ್ಷದ ಬಗ್ಗೆ ಅಭಿಮಾನ ಇರುವ ಯಾರೂ ಈ ರೀತಿ ಮಾತನಾಡುವುದಿಲ್ಲ. ಕೆಲವರಿಗೆ ಅಧಿಕಾರ ಬೇಕು. ಆದರೆ, ಅದನ್ನು ಪಡೆಯುವಷ್ಟು ಶಾಸಕರನ್ನು ಗೆಲ್ಲಿಸುವುದಿಲ್ಲ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಅವರನ್ನು ಮೊನ್ನೆಯವರೆಗೂ ಹೊಗಳುತ್ತಿದ್ದವರೇ ಇಂದು ತೆಗಳುತ್ತಿದ್ದಾರೆ’ ಎಂದು ‘ಜಿ 23’ ನಾಯಕರ ಹೆಸರು ಉಲ್ಲೇಖಿಸದೇ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.