ADVERTISEMENT

ಮಂತ್ರಾಲಯ ಶ್ರೀ: ಹನುಮಾನ ಮಂದಿರ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 16:56 IST
Last Updated 9 ಜೂನ್ 2019, 16:56 IST
ಪ್ರಶಾಂತನಗರದ ಹನುಮಾನ ಮಂದಿರದಲ್ಲಿ ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಭಕ್ತರಿಗೆ ಮುದ್ರಾಧಾರಣೆ ನೀಡಿದರು
ಪ್ರಶಾಂತನಗರದ ಹನುಮಾನ ಮಂದಿರದಲ್ಲಿ ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಭಕ್ತರಿಗೆ ಮುದ್ರಾಧಾರಣೆ ನೀಡಿದರು   

ಕಲಬುರ್ಗಿ: ಮೊದಲ ಬಾರಿಗೆ ಪುರ ಪ್ರವೇಶ ಮಾಡಿ ನಗರದಲ್ಲಿ ವಾಸ್ತವ್ಯ ಹೂಡಿರುವ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು ಭಾನುವಾರ ಬೆಳಿಗ್ಗೆ ಪ್ರಶಾಂತನಗರದ ಹನುಮಾನ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಭಕ್ತರು ಪಾದಪೂಜೆ ಮಾಡಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ವೇಳೆ ಸ್ವಾಮೀಜಿ ಕೆಲ ಭಕ್ತರಿಗೆ ಮುದ್ರಾಧಾರಣೆ ನೀಡಿ ಆರ್ಶೀವದಿಸಿದರು.

ಗುಂಡಾಚಾರ್ಯ ನರಿಬೋಳ, ಶ್ರೀಗಳ ಪುರಪ್ರವೇಶ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಕೃಷ್ಣಾಜಿ ಕುಲಕರ್ಣಿ, ಕಾರ್ಯದರ್ಶಿ ನವಲಿ ಕೃಷ್ಣಚಾರ್‌,ಉಪಾಧ್ಯಕ್ಷ ವೆಂಕಟೇಶ ಪಾಟೀಲ ಮಳಖೇಡ, ಗುಂಡೇರಾವ ದೇಸಾಯಿ, ರಾಮದಾಸ ಹಾಗೂ ನಾರಾಯಣ ಎಂ.ಜೋಶಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.