ADVERTISEMENT

ದೇಶಪ್ರೇಮ | ಬಿಜೆಪಿಯವರ ಸರ್ಟಿಫಿಕೇಟ್‌ ಬೇಕಿಲ್ಲ: ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 16:18 IST
Last Updated 7 ಮಾರ್ಚ್ 2024, 16:18 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಕಲಬುರಗಿ: ‘ಯಾರು ದೇಶಪ್ರೇಮಿ, ಯಾರು ದೇಶದ್ರೋಹಿ ಎಂಬ ಕುರಿತು ಬಿಜೆಪಿಯವರ ಸರ್ಟಿಫಿಕೇಟ್‌ ಬೇಕಿಲ್ಲ. ನಾವೆಲ್ಲರೂ ದೇಶಪ್ರೇಮಿಗಳೇ. ಯಾರೋ ಒಬ್ಬ ಕಿಡಿಗೇಡಿ ಮಾಡಿರುವ ಕೃತ್ಯಕ್ಕೆ ಅನಾವಶ್ಯಕವಾಗಿ ಎಲ್ಲರಿಗೂ ಪಟ್ಟಕಟ್ಟಬಾರದು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ, ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಪ್ರಕರಣ ಸೇರಿದಂತೆ ಇಂಥ ಪ್ರಕರಣಗಳಲ್ಲಿ ನಮ್ಮವರೋ, ಇನ್ನೊಬ್ಬರೋ ಎಂಬ ವಿಷಯ ಮುಖ್ಯವಲ್ಲ. ಇಂಥದಕ್ಕೆ ಕ್ಷಮೆ ಇರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಖಚಿತ’ ಎಂದರು.

‘ಹಿಂದೆ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ ಕೊಲೆಗಳಾದವು. ಈಗ ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಪ್ರಕರಣ ನಡೆದಿದೆ. ಇಂಥವನ್ನೆಲ್ಲ ಉಗ್ರ ಚಿಂತನೆಯುಳ್ಳವರೇ ಮಾಡುತ್ತಾರೆ. ಭಯ ಹುಟ್ಟಿಸಲು ಇದನ್ನು ಮಾಡುತ್ತಾರೆ. ಅವರನ್ನು ನಾವು ಮಟ್ಟಹಾಕಬೇಕು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.