ADVERTISEMENT

₹3 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸುತ್ತಿರುವ ಆರೋಪಿ ಮಂಜುನಾಥ ಮೇಳಕುಂದಿ

​ಪ್ರಜಾವಾಣಿ ವಾರ್ತೆ
Published 2 ಮೇ 2022, 6:53 IST
Last Updated 2 ಮೇ 2022, 6:53 IST
 ಮಂಜುನಾಥ ಮೇಳಕುಂದಿ
ಮಂಜುನಾಥ ಮೇಳಕುಂದಿ   

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾನುವಾರ ಸಿಐಡಿಗೆ ಶರಣಾಗಿರುವ ಅಮರ್ಜಾ ನೀರಾವರಿ ಯೋಜನೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ ಜಯನಗರದಲ್ಲಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸುತ್ತಿರುವುದು ಪತ್ತೆಯಾಗಿದೆ.

ಅಕ್ರಮ ನೇಮಕ ಪ್ರಕರಣ ಬೆಳಕಿಗೆ ಬರದಿದ್ದರೆ ವಿದೇಶಕ್ಕೆ ತೆರಳಿ ಇಂಟಿರಿಯರ್ ಡಿಸೈನ್‌ಗೆ ಅಗತ್ಯವಾದ ಪರಿಕರ ಹಾಗೂ ಪೀಠೋಪಕರಣಗಳನ್ನು ತರಲು ತಯಾರಿ ನಡೆಸಿದ್ದರು ಎನ್ನಲಾಗಿದೆ.

ಕಳೆದ 21 ದಿನಗಳ ಕಾಲ ಮಂಜುನಾಥ ಬೆಂಗಳೂರು, ಮಂಗಳೂರು, ಕಾರವಾರ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಒಂದು ಕಡೆ ನೆಲೆ ನಿಂತಿರಲಿಲ್ಲ ಎನ್ನಲಾಗಿದೆ.

ADVERTISEMENT

ಇವುಗಳನ್ನು ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.