ADVERTISEMENT

ಜಿಂಕೆ, ಕಾಡುಕುರಿ ಕೊಂಬು ಮಾರಾಟ ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 11:20 IST
Last Updated 19 ಡಿಸೆಂಬರ್ 2020, 11:20 IST
ಶನಿವಾರಸಂತೆ ಸಮೀಪದ ಕಿಬ್ಬೆಟ್ಟ ಗ್ರಾಮದ ಬಸ್ ತಂಗುದಾಣದ ಬಳಿ ಜಿಂಕೆ, ಕಾಡುಕುರಿಯ ಕೊಂಬುಗಳನ್ನು ವಶಪಡಿಸಿಕೊಂಡ ತಾಲ್ಲೂಕು ಸಿಐಡಿ ಅರಣ್ಯ ಘಟಕದ ಅಧಿಕಾರಿ ಎಂ.ಡಿ.ಅಪ್ಪಾಜಿ ಹಾಗೂ ಸಿಬ್ಬಂದಿ ಆರೋಪಿ ಎಚ್.ಎಂ.ಪ್ರಮೋದ್ ಎಂಬಾತನನ್ನು ಬಂಧಿಸಿರುವುದು
ಶನಿವಾರಸಂತೆ ಸಮೀಪದ ಕಿಬ್ಬೆಟ್ಟ ಗ್ರಾಮದ ಬಸ್ ತಂಗುದಾಣದ ಬಳಿ ಜಿಂಕೆ, ಕಾಡುಕುರಿಯ ಕೊಂಬುಗಳನ್ನು ವಶಪಡಿಸಿಕೊಂಡ ತಾಲ್ಲೂಕು ಸಿಐಡಿ ಅರಣ್ಯ ಘಟಕದ ಅಧಿಕಾರಿ ಎಂ.ಡಿ.ಅಪ್ಪಾಜಿ ಹಾಗೂ ಸಿಬ್ಬಂದಿ ಆರೋಪಿ ಎಚ್.ಎಂ.ಪ್ರಮೋದ್ ಎಂಬಾತನನ್ನು ಬಂಧಿಸಿರುವುದು   

ಶನಿವಾರಸಂತೆ: ಸಮೀಪದ ಕಿಬ್ಬೆಟ್ಟ ಗ್ರಾಮದ ಬಸ್ ತಂಗುದಾಣದ ಬಳಿ ಜಿಂಕೆ, ಕಾಡುಕುರಿಯ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಸಿಐಡಿ ಅರಣ್ಯ ಘಟಕದ ಅಧಿಕಾರಿ ಎಂ.ಡಿ.ಅಪ್ಪಾಜಿ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಹಾಸನ ಜಿಲ್ಲೆಯ ಹೊಳೆನರಸೀಪುರದ ಫ್ಲೋರ್ ಮಿಲ್ ಆಪರೇಟರ್ ಆರೋಪಿ ಎಚ್.ಎಂ.ಪ್ರಮೋದ್ ಎಂಬಾತನನ್ನು ಬಂಧಿಸಿದ್ದಾರೆ. ಶನಿವಾರಸಂತೆ ಹೋಬಳಿಯ ನಿಡ್ತ ಕೊಪ್ಪಲು ಗ್ರಾಮದ ಎನ್.ಎನ್.ಯತೀಶ್ ಪರಾರಿಯಾದ ಆರೋಪಿ.

ಇಬ್ಬರೂ ಜಿಂಕೆ, ಕಾಡುಕುರಿಯ ಕೊಂಬುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಅನ್ವಯ ದಾಳಿ ನಡೆಸಿದ ಅರಣ್ಯ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಚೀಲದಲ್ಲಿದ್ದ ಕಾಡುಕುರಿ 1 ಹಾಗೂ ಜಿಂಕೆಯ 2 ಕೊಂಬುಗಳನ್ನು ಮತ್ತು ಸ್ಥಳದಲ್ಲಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ ಅರಣ್ಯ ಘಟಕದ ಅಧಿಕಾರಿ ಎಂ.ಡಿ. ಅಪ್ಪಾಜಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ಕೆ.ಎಸ್.ಚಂಗಪ್ಪ, ಎನ್.ಆರ್.ರಮೇಶ್, ಎನ್.ಎಂ.ಗಣೇಶ್, ಸಿಬ್ಬಂದಿ ಚಂದ್ರಶೇಖರ್, ಯೋಗೇಶ್ ಪಾಲ್ಗೊಂಡಿದ್ದರು.

ಸಿ.ಐ.ಡಿ.ಅರಣ್ಯ ಘಟಕದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.