ADVERTISEMENT

ಗೋಣಿಕೊಪ್ಪಲು ದಸರೆ: ಗಮನ ಸೆಳೆದ ಸ್ತಬ್ದಚಿತ್ರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 12:24 IST
Last Updated 24 ಅಕ್ಟೋಬರ್ 2023, 12:24 IST
<div class="paragraphs"><p>ಸ್ತಬ್ದಚಿತ್ರ ಮೆರವಣಿಗೆ</p></div>

ಸ್ತಬ್ದಚಿತ್ರ ಮೆರವಣಿಗೆ

   

ಗೋಣಿಕೊಪ್ಪಲು (ಮಡಿಕೇರಿ): ಗೋಣಿಕೊಪ್ಪಲು ದಸರೆಯು ಸ್ತಬ್ದಚಿತ್ರ ಮೆರವಣಿಗೆಯೊಂದಿಗೆ ಆರಂಭವಾಗಿದೆ.

ದಸರಾ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಒಟ್ಟು 12 ಸ್ತಬ್ದಚಿತ್ರಗಳು ಭಾಗಿಯಾಗಿವೆ. 5 ಶಿಕ್ಷಣ ಇಲಾಖೆ, ಆರೋಗ್ಯ, ನೀರಾವರಿ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಯೋಜನೆಗಳ ಕುರಿತು ಸ್ತಬ್ಧಚಿತ್ರ ರೂಪಿಸಿವೆ.

ADVERTISEMENT

ಉಳಿದಂತೆ, 6 ಸ್ತಬ್ದಚಿತ್ರಗಳನ್ನು ವಿವಿಧ ಸಂಘ, ಸಂಸ್ಥೆಗಳು ರೂಪಿಸಿವೆ. ಭಗತ್ ಸಿಂಗ್ ಯುವಕ ಸಂಘವು ಬೆಂಗಳೂರಿನಲ್ಲಿ ಈಚೆಗೆ ನಡೆದ ಪಟಾಕಿ ದುರಂತದ ಭೀಕರ ಚಿತ್ರಣವನ್ನು ಸ್ತಬ್ದಚಿತ್ರದಲ್ಲಿ ತಂದಿದ್ದರೆ, ಸರ್ವಂ ಸಂಘದವರು ಚಂದ್ರಯಾನ –3 ಚಿತ್ರಣವನ್ನು ಸ್ತಬ್ದಚಿತ್ರದಲ್ಲಿ ತಂದಿದೆ. ಜೆಬಿ ಪುರುಷ ಸ್ವಸಹಾಯ ಸಂಘದವು ಬುಡಕಟ್ಟು ಮಕ್ಕಳು ಶಾಲೆಗೆ ಕರೆದು ಕೊಂಡು ಬರುವ ಕುರಿತು ಸ್ತಬ್ದಚಿತ್ರ ರೂಪಿಸಿದೆ.

‘ರುದ್ರ ಬಾಯ್ಸ್ ಚನ್ನಂಗೊಳ್ಳಿ’ ತಂಡವು ಪ್ಲಾಸ್ಟಿಕ್ ದುಷ್ಪರಿಣಾಮ ಕುರಿತು ಪರಿಣಾಮಕಾರಿಯಾಗಿ ಸ್ತಬ್ದಚಿತ್ರ ರೂಪಿಸಿತ್ತು. ಇದರ ಜೊತೆಗೆ ಪುತ್ತೂರಿನ ಗಾರುಡಿ ಬೊಂಬೆಗಳು ಸೇರಿದಂತೆ ಇನ್ನಿತರ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.