ADVERTISEMENT

ಸುಂಟಿಕೊಪ್ಪ | ಬಸ್‌ಗಳ ಸಮಸ್ಯೆ: ಸಾರಿಗೆ ನಿಯಂತ್ರಕರ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 4:12 IST
Last Updated 3 ಡಿಸೆಂಬರ್ 2024, 4:12 IST
ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಬಸ್‌ಗಳ ತೊಂದರೆ ನಿವಾರಿಸಲು‌ ಮಡಿಕೇರಿ ಕೆಎಸ್ಆರ್‌ಟಿಸಿ ಘಟಕದ ಸಾರಿಗೆ ನಿಯಂತ್ರಕ ಅಶೋಕ್ ಸುಂಟಿಕೊಪ್ಪಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು
ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರಿ ಬಸ್‌ಗಳ ತೊಂದರೆ ನಿವಾರಿಸಲು‌ ಮಡಿಕೇರಿ ಕೆಎಸ್ಆರ್‌ಟಿಸಿ ಘಟಕದ ಸಾರಿಗೆ ನಿಯಂತ್ರಕ ಅಶೋಕ್ ಸುಂಟಿಕೊಪ್ಪಕ್ಕೆ ಭೇಟಿ‌ ನೀಡಿ ಪರಿಶೀಲಿಸಿದರು   

ಸುಂಟಿಕೊಪ್ಪ: ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಬೆಳಿಗ್ಗೆ ಹೊತ್ತು ಕೆಎಸ್‌ಆರ್‌ಟಿಸಿ ಬಸ್ ಸಮಸ್ಯೆಯಾಗುತ್ತಿರುವ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿದ ಬೆನ್ನೆಲ್ಲೆ ಕೆಎಸ್‌ಆರ್‌ಟಿಸಿ ಘಟಕದ ಸಾರಿಗೆ ನಿಯಂತ್ರಕ ಅಶೋಕ್ ಅವರು ಸೋಮವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡಿಕೇರಿ ಘಟಕದ ವ್ಯವಸ್ಥಾಪಕ ಮೆಹಬೂಬು ಆಲಿ ಅವರು ಅಶೋಕ್ ಅವರಿಗೆ ಸಮಸ್ಯೆ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೆಹಬೂಬು ಆಲಿ, ‘ಈ ಸಮಸ್ಯೆ ಬಗೆಹರಿಸಲು ಬೆಳಿಗ್ಗೆ ಮಡಿಕೇರಿಯಿಂದ ಹೊರಟು ಕೊಡಗರಹಳ್ಳಿಯವರೆಗೆ, ಅಲ್ಲಿಂದ ಹಿಂತಿರುಗಿ ಸುಂಟಿಕೊಪ್ಪಕ್ಕೆ ಬೆಳಿಗ್ಗೆ 9.15ರೊಳಗೆ ಎರಡು ಬಸ್‌ಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ‌ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.