ADVERTISEMENT

ಕಾಡುಹಂದಿ ದಾಳಿ: ಬಾಲಕಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:35 IST
Last Updated 11 ಫೆಬ್ರುವರಿ 2019, 14:35 IST

ಗೋಣಿಕೊಪ್ಪಲು: ಕಿರುಗೂರು ಬಳಿಯ ರುದ್ರಬೀಡುವಿನಲ್ಲಿ ಕಾಡುಹಂದಿಯೊಂದು ಬಾಲಕಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಲಕ್ಷ್ಮಿ (6) ಗಾಯಗೊಂಡಿರುವ ಬಾಲಕಿ. ಬಾಲಕಿ ತಂದೆ ಸುರೇಶ್ ಜೊತೆಯಲ್ಲಿ ಕಾಫಿ ತೋಟದಲ್ಲಿ ಅಡ್ಡಾಡುತ್ತಿದ್ದಾಗ ಕಾಡು ಹಂದಿಯೊಂದು ದಿಢೀರನೆ ಎದುರಾಯಿತು ಎನ್ನಲಾಗಿದೆ. ಓಡುವ ಭರದಲ್ಲಿ ಎದುರುಗಿದ್ದ ಲಕ್ಷ್ಮಿಯ ಮೇಲೆ ಕಾಡು ಹಂದಿ ದಾಳಿ ನಡೆಸಿತು. ಇದರಿಂದ ಮಗುವಿನ ಎಡಗಾಲಿನ ಭಾಗಕ್ಕೆ ಗಾಯವಾಗಿದೆ.

ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿತಿಮತಿ ಆರ್‌ಎಫ್ಒ ಅಶೋಕ್ ಹುನಗುಂದ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.