ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಮಂಗಳವಾರ ದಿನವಿಡೀ ಬಿಡುವು ಕೊಟ್ಟು ಸಾಧಾರಣ ಮಳೆ ಸುರಿಯಿತು. ಜೊತೆಗೆ, ಶೀತಗಾಳಿ ಬೀಸುತ್ತಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಇಳಿದಿದೆ. ಅಯ್ಯಂಗೇರಿ – ಭಾಗಮಂಡಲ, ಮೂರ್ನಾಡು – ನಾಪೋಕ್ಲು, ಚೆರಿಯಪರಂಬು – ಕಲ್ಲುಮೊಟ್ಟೆ ನಡುವೆ ವಾಹನ ಸಂಚಾರ ಆರಂಭವಾಗಿದೆ. ಎಮ್ಮೆಮಾಡು, ಹೊದ್ದೂರು, ಕರಡಿಗೋಡು ಭಾಗದಲ್ಲಿ ಕಾವೇರಿ ನದಿಯ ಪ್ರವಾಹ ಇಳಿಮುಖವಾಗಿದೆ. ಹಾರಂಗಿ ಇಲಾಶಯದ ಒಳಹರಿವು ತಗ್ಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.