ADVERTISEMENT

ಕೊಡಗು: ಹೊಳೆಯಲ್ಲಿ ಮುಳುಗಿ ಯುವಕ ಸಾವು; ಹೃದಯಾಘಾತದಿಂದ ಅಜ್ಜಿ ನಿಧನ

ಅಸ್ವಸ್ಥಗೊಂಡ ತಾಯಿಯೂ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 12:30 IST
Last Updated 9 ಏಪ್ರಿಲ್ 2021, 12:30 IST
ಮುಬಾಶೀರ್
ಮುಬಾಶೀರ್   

ಸುಂಟಿಕೊಪ್ಪ (ಕೊಡಗು): ಸಮೀಪದ ಹೊಸತೋಟ ಬಳಿಯ ಹಾರಂಗಿ ಹಿನ್ನೀರಿನಲ್ಲಿ ಗುರುವಾರ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ 2ನೇ ಐಗೂರು ನಿವಾಸಿ ರಮ್ಲಾನ್ ಅವರ ಪುತ್ರ ಮುಬಾಶೀರ್ (18) ಎಂಬ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ವಿಷಯ ತಿಳಿದು ಯುವಕನ ಅಜ್ಜಿ ರುಕಿಯಾ (62) ಅವರೂ ಹೃದಯಾಘಾತದಿಂದ ನಿಧನರಾದ ಹೃದಯವಿದ್ರಾವಕ ಘಟನೆ ನಡೆದಿದೆ. ಯುವಕನ ತಾಯಿಯೂ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಸತೋಟ ಹಾಗೂ ಐಗೂರಿವಿನ 11 ಮಂದಿ ಯುವಕರು ಗುರುವಾರ ಬೆಳಿಗ್ಗೆ ಫುಟ್‌ಬಾಲ್ ಆಡಲು ತೆರಳಿದ್ದರು. ನಂತರ, ಸ್ನಾನ ಮಾಡಲೆಂದು ಮುಬಾಶೀರ್ ಹೊಳೆಗೆ ಇಳಿದಿದ್ದಾನೆ. ಆದರೆ, ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಅದನ್ನು ಕಣ್ಣಾರೆ ಕಂಡಿದ್ದ ಉಳಿದವರ ಅಲ್ಲಿಂದ ತೆರಳಿದ್ದರು.

ಗುರುವಾರ ರಾತ್ರಿ 10 ಗಂಟೆಯಾದರೂ ಮುಬಾಶೀರ್‌ ಮನೆಗೆ ಬಂದಿರಲಿಲ್ಲ. ಸ್ನೇಹಿತರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಿಗ್ಗೆ ಯುವಕನ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದು ಅಜ್ಜಿ ನಿಧನರಾದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು.

ADVERTISEMENT

ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.