ಮಡಿಕೇರಿ: ‘ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯಲ್ಲಿ ಒಂದು ಕಡೆ ಸ್ವಲ್ಪ ಪ್ರಮಾಣದಲ್ಲಿ ಮಣ್ಣು ಮಳೆ ನೀರಿಗೆ ಕೆಳಗೆ ಬಂದಿದ್ದು, ಯಾವುದೇ ಅಪಾಯ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ತಡೆಗೋಡೆಗೆ ಅಪಾಯ’ ಎಂಬ ಸುದ್ದಿ ವ್ಯಾಪಕವಾಗಿ ಹರಡಿರುವ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಗೌಡ, ‘ತಡೆಗೋಡೆಗೆ ಯಾವುದೇ ಅಪಾಯ ಇಲ್ಲ. ಮಳೆಗೆ ಸ್ವಲ್ಪ ಮಣ್ಣು ಕೆಳಗೆ ಜಾರಿದೆ. ಇದರಿಂದ ಸಂಚಾರಕ್ಕಾಗಲಿ ಅಥವಾ ತಡೆಗೋಡೆಗಾಗಲಿ ಯಾವುದೇ ಅಪಾಯ ಇಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.