ADVERTISEMENT

ಕುಟ್ಟಪ್ಪ ಸ್ಮರಣೆ: ದೇಗುಲಗಳಲ್ಲಿ ಶಾಂತಿಪೂಜೆ, ಮಡಿಕೇರಿಯಲ್ಲಿ ಪೊಲೀಸರ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 4:21 IST
Last Updated 10 ನವೆಂಬರ್ 2021, 4:21 IST
ಕುಟ್ಟಪ್ಪ ಸ್ಮರಣೆ: ದೇಗುಲಗಳಲ್ಲಿ ಶಾಂತಿಪೂಜೆ, ಮಡಿಕೇರಿಯಲ್ಲಿ ಪೊಲೀಸರ ಕಟ್ಟೆಚ್ಚರ
ಕುಟ್ಟಪ್ಪ ಸ್ಮರಣೆ: ದೇಗುಲಗಳಲ್ಲಿ ಶಾಂತಿಪೂಜೆ, ಮಡಿಕೇರಿಯಲ್ಲಿ ಪೊಲೀಸರ ಕಟ್ಟೆಚ್ಚರ   

ಮಡಿಕೇರಿ: 2015ರ ನವೆಂಬರ್ 10ರಂದು ನಗರದಲ್ಲಿ ನಡೆದಿದ್ದ ಟಿಪ್ಪು ಜಯಂತಿ ವೇಳೆ ಮೃತಪಟ್ಟಿದ್ದ ದೇವಪ್ಪಂಡ ಕುಟ್ಟಪ್ಪ ಸ್ಮರಣಾರ್ಥವಾಗಿ ಹಿಂದೂ ಜಾಗರಣಾ ವೇದಿಕೆ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ಓಂಕಾರೇಶ್ವರ ಸೇರಿ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಶಾಂತಿಪೂಜೆ ನೆರವೇರಿಸಿದರು.

ವಿಎಚ್‌ಪಿ ಅಧ್ಯಕ್ಷ ಕೃಷ್ಣಮೂರ್ತಿ, ಸುರೇಶ್ ಮುತ್ತಪ್ಪ, ಅಜಿತ್ ಕುಮಾರ್, ರಮೇಶ್, ಚೇತನ್ ಮೊದಲಾದವರು ಇದ್ದರು.

ಕೊಡಗು ಜಿಲ್ಲೆಯಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ADVERTISEMENT

ಯಾವುದೇ ಮೆರವಣಿಗೆ, ಸಭೆಗೆ ಅವಕಾಶ ಇಲ್ಲ. ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಇದೆ. ಕ್ಷಿಪ್ರ ಕಾರ್ಯ ಪಡೆ ಹಾಗೂ ಪೊಲೀಸರು ಸೂಕ್ಷ್ಮ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ.

ಓಂಕಾರೇಶ್ವರ ಸೇರಿ​ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಶಾಂತಿಪೂಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.