ವಿರಾಜಪೇಟೆ: ಕೇರಳ ರಾಜ್ಯದ ಲಾಟರಿಯನ್ನು ಪಟ್ಟಣದಲ್ಲಿ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಟ್ಟಣದ ಕಲ್ಲುಬಾಣೆಯ ಅಬುಬಕರ್ ಮತ್ತು ಪಿರಿಯಪಟ್ಟಣದ ಪಿ.ಕೆ.ಚಂದ್ರ ಬಂಧಿತ ಆರೋಪಿಗಳು.
ಪೊಲೀಸರು ವಾಹನವನ್ನು ಪರಿಶೀಲನೆ ನಡೆಸಿದಾಗ ₹43,760 ಮೌಲ್ಯದ ಒಟ್ಟು 1,094 ಲಾಟರಿ ಚೀಟಿಗಳು ಮತ್ತು ಲಾಟರಿ ಮಾರಾಟದಿಂದ ಬಂದ ₹1,690 ನಗದನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಿಪಿಐ ಬಿ.ಎಸ್. ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎನ್.ಎಸ್. ಲೋಕೇಶ್, ಟಿ.ಎಸ್.ಗಿರೀಶ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.