ADVERTISEMENT

ಮಡಿಕೇರಿ: ‘ಯುವ ಕಲೋತ್ಸವ’ ಕಾಲೇಜುಗಳಲ್ಲಿ ಪ್ರಚಾರ ಕಾರ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:15 IST
Last Updated 23 ಸೆಪ್ಟೆಂಬರ್ 2022, 13:15 IST
ಮಡಿಕೇರಿ ದಸರಾ ಅಂಗವಾಗಿ ಅ.1ರಂದು ನಡೆಯಲಿರುವ ‘ಯುವ ಕಲೋತ್ಸವ’ದ ಪ್ರಚಾರ ಕಾರ್ಯವು ಶುಕ್ರವಾರ  ಎಫ್‌ಎಂಸಿ ಕಾಲೇಜಿನಲ್ಲಿ ನಡೆಯಿತು
ಮಡಿಕೇರಿ ದಸರಾ ಅಂಗವಾಗಿ ಅ.1ರಂದು ನಡೆಯಲಿರುವ ‘ಯುವ ಕಲೋತ್ಸವ’ದ ಪ್ರಚಾರ ಕಾರ್ಯವು ಶುಕ್ರವಾರ  ಎಫ್‌ಎಂಸಿ ಕಾಲೇಜಿನಲ್ಲಿ ನಡೆಯಿತು   

ಮಡಿಕೇರಿ: ಮಡಿಕೇರಿ ದಸರಾ ಅಂಗವಾಗಿ ಅ.1ರಂದು ನಡೆಯಲಿರುವ ‘ಯುವ ಕಲೋತ್ಸವ’ದ ಪ್ರಚಾರ ಕಾರ್ಯವು ಶುಕ್ರವಾರ ಇಲ್ಲಿನ ಎಫ್‌ಎಂಸಿ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮ ಆಯೋಜಕ ಸಂಸ್ಥೆ ಕಿಂಬರ್ಲಿ ರಿಕ್ರಿಯೇಷನ್‌ನ ಪದಾಧಿಕಾರಿಗಳು ಯುವ ದಸರೆಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಸಂಸ್ಥೆ ಅಧ್ಯಕ್ಷ ಮದನ್ ಮಾತನಾಡಿ, ‘ಈ‌ ಬಾರಿಯ ಯುವ ಕಲೋತ್ಸವ ವಿಭಿನ್ನವಾಗಿ ಆಯೋಜಿಸಲು ತೀರ್ಮಾನಿಸಿದ್ದು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಗವತಿ ನಗರದಿಂದ ಗಾಂಧಿ ಮೈದಾನದವರೆಗೆ ಬೈಕ್ ರ‍್ಯಾಲಿ ಆಯೋಜಿಸಿದ್ದು, ಅದರಲ್ಲಿ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಮೋನಿಷ್, ದಿನೇಶ್, ಪ್ರಜ್ಞಾ, ವಿನಯ್ ಕುಮಾರ್, ರಂಜಿತ್, ಸುಜಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.