ADVERTISEMENT

ಪೌರ ಕಾರ್ಮಿಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 15:43 IST
Last Updated 21 ಏಪ್ರಿಲ್ 2020, 15:43 IST

ಕೋಲಾರ: ನಗರದ 23ನೇ ವಾರ್ಡ್‌ ಸದಸ್ಯೆ ಅಝ್ರ ನಸ್ರೀನ್ ಅವರ ಪತಿ ಸಾದಿಕ್‌ ಪಾಷಾ ಅವರು ನಗರಸಭೆಯ ಪೌರ ಕಾರ್ಮಿಕನ ಮೇಲೆ ಮಂಗಳವಾರ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ.

23ನೇ ವಾರ್ಡ್‌ನ ಬಡಾವಣೆಯೊಂದರಲ್ಲಿ ಯುಜಿಡಿ ಸಮಸ್ಯೆಯಾಗಿ ಕೊಳಚೆ ನೀರು ರಸ್ತೆಗೆ ಹರಿಯುತ್ತಿತ್ತು. ಈ ಸಂಬಂಧ ಸಾದಿಕ್‌ ಪಾಷಾ ನಗರಸಭೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಯುಜಿಡಿ ಸ್ವಚ್ಛತಾ ವಾಹನದಲ್ಲಿ ಇಬ್ಬರ ಸಹಾಯಕರೊಂದಿಗೆ ಸ್ಥಳಕ್ಕೆ ತೆರಳಿದ್ದ ಪೌರ ಕಾರ್ಮಿಕ ಮುನಿಯಪ್ಪ ಸ್ವಚ್ಛತಾ ಕೆಲಸ ಅರ್ಧಕ್ಕೆ ಸ್ಥಗಿತಗೊಳಿಸಿ ಬೇರೊಂದು ಬಡಾವಣೆಗೆ ಹೋಗಲು ಮುಂದಾಗಿದ್ದಾರೆ.

ಇದರಿಂದ ಕೋಪಗೊಂಡ ಸಾದಿಕ್‌ ಪಾಷಾ ಸಂಪೂರ್ಣವಾಗಿ ಯುಜಿಡಿ ಸ್ವಚ್ಛಗೊಳಿಸಿ ಬೇರೆ ಬಡಾವಣೆಗೆ ಹೋಗುವಂತೆ ಪಟ್ಟು ಹಿಡಿದು ಮುನಿಯಪ್ಪರ ಜತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಪರಸ್ಪರರ ಮಧ್ಯೆ ಮಾತಿನ ಚಕಮಕಿ ನಡೆದು ಸಾದಿಕ್‌ ಅವರು ಮುನಿಯಪ್ಪರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಮುನಿಯಪ್ಪ ಅವರು ಸಾದಿಕ್‌ ಪಾಷಾ ವಿರುದ್ಧ ನಗರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.